Telangana: ವ್ಯಕ್ತಿಯನ್ನೇ ಬಲಿ ಪಡೆದ ಮಾಸಾಲೆ ದೋಸೆ ಮತ್ತು ಮದ್ಯ !! ಅಷ್ಟಕ್ಕೂ ಆಗಿದ್ದೇನು?

Telangana: ಮಸಾಲೆ ದೋಸೆ ತಿನ್ನುವಾಗ, ದೋಸೆ (dosa ) ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ತೆಲಂಗಾಣದ(Telangana) ಕಲ್ವಕುರ್ತಿಯಲ್ಲಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ವೆಂಕಟಯ್ಯ(43) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಸುಭಾಷನಗರ ನಿವಾಸಿಯಾಗಿದ್ದಾರೆ. ಎಂದಿನಂತೆ ವೆಂಕಟಯ್ಯ ಮದ್ಯಪಾನ ಮಾಡಿದ ಬಳಿಕ ತನ್ನ ಬಳಿಯಲ್ಲಿದ್ದ ದೋಸೆಯನ್ನು ತಿನ್ನಲು ಮುಂದಾದ. ದೋಸೆ ತಿನ್ನುವ ವೇಳೆಯಲ್ಲಿ ದೋಸೆ ಇದ್ದಕ್ಕಿದ್ದಂತೆಯೇ ಗಂಟಲಿನಲ್ಲಿ ದೋಸೆ ಸಿಲುಕಿಕೊಂಡು ಸಾವಿಗೀಡಾಗಿದ್ದಾನೆ.

ಅಷ್ಟಕ್ಕೂ ಆಗಿದ್ದೇನು?
ಕುಟುಂಬದವರ ಹೇಳುವ ಪ್ರಕಾರ, ವೆಂಕಟಯ್ಯ ಮದ್ಯ ಸೇವಿಸಿ ನಂತ್ರ ದೋಸೆ ತಿನ್ನುತ್ತಿದ್ದನು. ಈ ಅನುಕ್ರಮದಲ್ಲಿ, ದೋಸೆ ಗಂಟಲಿಗೆ ಸಿಲುಕಿಕೊಂಡು ಉಸಿರಾಡಲು ಸಾಧ್ಯವಾಗಲಿಲ್ಲ. ನೀರು ಕುಡಿಯುವಾಗ ಪಕ್ಕಕ್ಕೆ ಬಿದ್ದು ಪ್ರಜ್ಞಾಹೀನರಾದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದಿದ್ದಾರೆ.

Leave A Reply

Your email address will not be published.