Spandana Death: ಏನಿದು ರಾಜ್‌ ಕುಟುಂಬಕ್ಕೆ ಹೃದಯ ಕಂಟಕ? ಪುನೀತ್ ರಾಜ್ ನಿಧನದ ಬೆನ್ನಲ್ಲೇ ಮತ್ತೊಂದು ಎಳೆಯ ರಾಜ್ ಕುಡಿ ನಿರ್ಗಮನ !

ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಭಾನುವಾರ (ಆಗಸ್ಟ್ 6) ನಿಧನ ಹೊಂದಿದ್ದಾರೆ. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಆರೋಗ್ಯವಾಗಿದ್ದ ಸ್ಪಂದನಾ ಏಕಾಏಕಿ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ. ಈ ಸುದ್ದಿ ತಿಳಿದು ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಭಿಮಾನಿಗಳಿಗೂ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ ಹಾಗೂ ವಿಜಯ್ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಅದಕ್ಕೂ ಮೊದಲೇ ಸ್ಪಂದನಾ ಮೃತಪಟ್ಟಿದ್ದಾರೆ.

ಈ ಮಧ್ಯೆ ಏನಿದು ರಾಜ್ ಕುಟುಂಬಕ್ಕೆ ಹೃದಯ ಕಂಟಕ ಎನ್ನುವ ಪ್ರಶ್ನೆ ಎದ್ದಿದೆ. ಹೌದು ಕನ್ನಡದವರನ್ನು ಡಾಕ್ಟರ್ ರಾಜಕುಮಾರ್ ಕುಟುಂಬಕ್ಕೆ ಹೃದಯ ಕಂಠಕ ಎದುರಾಗಿದೆ ಎನ್ನುವ ಪ್ರಶ್ನೆ ಇವತ್ತು ಮೂಡಿದೆ. ಸದಾ ಲವಲವಿಕೆಯಿಂದ ಇರುತ್ತಿದ್ದ ವ್ಯಾಯಾಮ ಮಾಡಿ ಫಿಟ್ನೆಸ್ ಅನ್ನು ಸರಿಯಾಗಿ ನೋಡಿಕೊಂಡು ಮಾಡುತ್ತಿದ್ದ ಪುನೀತ್ ರಾಜಕುಮಾರ್ ಕೇವಲ 46 ವರ್ಷಕ್ಕೆ ಹೃದಯ ಸ್ತಂಭನ ಹೊಂದಿದ್ದರು. ಇದೀಗ ಸ್ಪಂದನ ಕೂಡ ರಾಜ್ ಕುಟುಂಬದ ಒಂದು ಕುಡಿ. ರಾಜಕುಮಾರ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ತಮ್ಮ ಚಿನ್ನೆ ಗೌಡ. ಇದೇ ಚಿಹ್ನೆಗೌಡರ ಮಗ ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ.

ಈ ವಿಜಯ ರಾಘವೇಂದ್ರ ಅವರನ್ನು 2007ರಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿದ್ದ ಬಿಕೆ ಶಿವಕುಮಾರ್ ಅವರ ಪುತ್ರಿ ಸ್ಪಂದನರನ್ನು ವಿವಾಹ ಮಾಡಿ ಕೊಡಲಾಗಿತ್ತು. ಅವರದು 16 ವರ್ಷಗಳ ದಾಂಪತ್ಯ ಇನ್ನೂ 19 ದಿನಗಳು ಕಳೆದರೆ ಅವರ ಮದುವೆಯಾಗಿ 16 ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ವಿಧಿ ತನ್ನ ಆಟವಾಡಿದೆ. ನಟಿ ನಿರ್ಮಾಪಕ ಮತ್ತು ಸೆಲೆಬ್ರಿಟಿ ಕುಟುಂಬದ ಕುಡಿ ಸ್ಪಂದನ ಇನ್ನಿಲ್ಲ.

ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಹೃದಯಘಾತ ! ಸ್ಯಾಂಡಲ್ ವುಡ್ ಗೆ ಭಾರಿ ಶಾಕ್ ಕೊಟ್ಟ ನಿಧನ ಸುದ್ದಿ

ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರ ಮಗಳು ಸ್ಪಂದನಾ. ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. 2007ರ ಆಗಸ್ಟ್ 26 ರಂದು ಇವರು ಹಸಮಣೆ ಏರಿದ್ದರು. ಇನ್ನು, 19 ದಿನ ಕಳೆದಿದ್ದರೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದರಲ್ಲಿತ್ತು. ಅದಕ್ಕೂ ಮೊದಲೇ ವಿಧಿ ಇವರ ಬಾಳಲ್ಲಿ ಆಟವಾಡಿದೆ.

ಸ್ಪಂದನಾ ಅವರು ತಮ್ಮ ಗೆಳೆಯರು ಮತ್ತು ಕೆಲ ಕುಟುಂಬ ಸದಸ್ಯರ ಜೊತೆ ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದರು. ಪತಿ ವಿಜಯ್ ರಾಘವೇಂದ್ರ ಬ್ಯಾಂಕಾಕ್ ಗೆ ತೆರಳಿರಲಿಲ್ಲ. ಈ ವೇಳೆ ಸ್ಪಂದನಾಗೆ ಹೃದಯಾಘಾತ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ನಲ್ಲೇ ನಡೆಯಲಿದೆ. ನಾಳೆ, ಮಂಗಳವಾರ (ಆಗಸ್ಟ್ 8) ಅವರ ಮೃತದೇಹ ಬೆಂಗಳೂರಿಗೆ ಬರಲಿದೆ.

Comments are closed.