ಚಿಕ್ಕಮಗಳೂರಿನಿಂದ ಜೈನ ತೀರ್ಥಯಾತ್ರೆಗೆ ಹೊರಟ 108 ಮಂದಿ ಪವಾಡಸದೃಶ ಪಾರು, ಕೊನೆಯ ಕ್ಷಣದಲ್ಲಿ ಬೋಗಿ ಬದಲಾಗಿ ಉಳಿದಿತ್ತು ಕನ್ನಡಿಗರ ಜೀವ !

108 people left for Jain pilgrimage from Chikkamagalur had a miraculous escape

Jain pilgrimage : ಜೈನ ಸನ್ಯಾಸಿಯನ್ನು ಭೇಟಿಯಾಗಲು ಹೊರಟಿದ್ದ ಕರ್ನಾಟಕದ 108 ಮಂದಿ ಪವಾಡ ಸದೃಶ್ಯವಾಗಿ ಪಾರಾಗಿರುವ ಘಟನೆ ನಿನ್ನೆ ಸಂಜೆ ನಡೆದ ಭೀಕರ ರೈಲು ಅಪಘಾತದಲ್ಲಿ ನಡೆದಿದೆ.

ಕಳಸ ಸಂಸೆ ಹೊರನಾಡು ಮತ್ತು ಚಿಕ್ಕಮಗಳೂರಿನ ಕಡೆಯಿಂದ ಸಮೇದ್ ಸಿಖರ್ಜಿಯ ಜೈನ ಯಾತ್ರಾಸ್ಥಳ (Jain pilgrimage) ವನ್ನು ಭೇಟಿಯಾಗಲು ಕರ್ನಾಟಕದಿಂದ ಒಂದು ತಂಡ ಹೊರಟಿತ್ತು. ಚಿಕ್ಕಮಂಗಳೂರಿನಿಂದ ಹೊರಟ 108 ಮಂದಿಯ ಈ ತಂಡ ಮೊದಲು ಬೆಂಗಳೂರು ತಲುಪಿತ್ತು. ನಂತರ ಬೆಂಗಳೂರಿನಿಂದ ಯಶವಂತಪುರ ಅವರ ಎಕ್ಸ್ಪ್ರೆಸ್ ರೈಲು ಹತ್ತಿ ಕುಳಿತಿತ್ತು. ಯಶವಂತಪುರದಿಂದ ಹೊರಟ ರೈಲು 10 ಕಿಲೋಮೀಟರ್ ತಲುಪುವಷ್ಟರಲ್ಲಿ ನೆಲಮಂಗಲದಲ್ಲಿ ಇಂಜಿನ್ ಬದಲಾಗಿತ್ತು. ಆಗ ಬೋಗಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಹಿಂದೆ ಇದ್ದ ನಾಲ್ಕು ಸ್ಲೀಪರ್ ಕೊಚ್ ಗಳನ್ನು ತೆಗೆದು ಇಲ್ಲಿದ್ದ ಎಲ್ಲರನ್ನೂ ಮುಂದಕ್ಕೆ ಬಂದಿದೆ. ಹಾಗೆ S1 ನಿಂದ S4 ಬೋಗಿಗೆ ಹೋಗಿ ಕುಳಿತ ಈ ಜೈನ ಯಾತ್ರಿಗಳು ಪವಾಡ ಸದೃಶವಾಗಿ ಪಾರಾಗಿ ಬಂದಿದ್ದಾರೆ.
ಅದಕ್ಕೆ ಅವರಿದ್ದ ಬೋಗಿಯನ್ನು ಬದಲಾಯಿಸಿದ್ದೆ ಕಾರಣ. ಇವರು ಮೊದಲು ಇದ್ದ ಹಿಂದಿನ ಸ್ಲೀಪರ್ ಕೋಚ್ ಗಳು ಭೀಕರವಾಗಿ ಅಪಘಾತವಾಗಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ.

ಜಾರ್ಖಂಡ್ ನಲ್ಲಿರುವ ಸಮೇದ್ ಶಿಖರ್ಜಿಯ ಜೈನರ ಪವಿತ್ರ ತೀರ್ಥ ಯಾತ್ರೆ ಸ್ಥಳವಾಗಿದ್ದು ಅಲ್ಲಿನ ಜೈನ ಮುನಿಗಳು ಸ್ವಂತ ಖರ್ಚಿನಲ್ಲಿ 108 ಜನರನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಜೈನ ಮುನಿಗಳ ಆಶೀರ್ವಾದ ಏನು ಎಲ್ಲಾ 108 ಮಂದಿ ಅದೃಷ್ಟ ವಶಾತ್ ಒಂದು ಚಿಕ್ಕ ಗಾಯವು ಕೂಡಾ ಆಗದಂತೆ ಪಾರಾಗಿ ಬಂದಿದ್ದಾರೆ. ಹಾಗಾಗಿ ಕರ್ನಾಟಕದ ಕಡೆಯಿಂದ ಈ ತನಕ ಯಾವುದೇ ಸಾವು ನೋವಿನ ಪ್ರಕರಣ ವರದಿಯಾಗಿಲ್ಲ.

ಇದನ್ನೂ ಓದಿ: ಕಣ್ಣು ಕಾಣದ ತಾಯಿ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ! ಆತ್ಮಹತ್ಯೆಗೆ ಶರಣಾದ ಮಹಿಳೆ! ಆರೋಪಿ ಅರೆಸ್ಟ್‌

Leave A Reply

Your email address will not be published.