Madhya Pradesh : ಇದೆಂಥಾ ದುಸ್ಥಿತಿ…! ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದಿದ್ದಕ್ಕೆ ವೃದ್ಧನನ್ನು ಕಂಬಳಿಯಲ್ಲಿ ಧರ ಧರನೇ ಎಳೆದೊಯ್ದ ಸೊಸೆ… ಮುಂದೇನಾಯ್ತು ಗೊತ್ತಾ?

Share the Article

Madhyapradesh Hospital : ಮಧ್ಯಪ್ರದೇಶ: ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತ ರೋಗಿಯನ್ನು ಮಹಿಳೆಯೋರ್ವಳು ಕಂಬಳಿಯಲ್ಲಿ ಧರ ಧರನೇ ಆಸ್ಪತ್ರೆಗೆ ಎಳೆದೊಯ್ದಿರುವ ಘಟನೆಯೊಂದು ನಡೆದಿದೆ. ಇದನ್ನು ನೋಡಿ ಅಲ್ಲಿದ್ದ ಜನರಿಗೆ ಆಘಾತ ಉಂಟು ಮಾಡಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ( Madhyapradesh Hospital)ಮಹಿಳೆಯೊಬ್ಬಳು ವೃದ್ಧನೊಬ್ಬನನ್ನು ಸ್ಟ್ರೆಚರ್ ಇಲ್ಲದೆ ಕಂಬಳಿ ಮೇಲೆ ಎಳೆದುಕೊಂಡು ಬಂದಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದನ್ನು ನೋಡಿ ನೆಟ್ಟಿಗರು ಆಕ್ರೋಶ ಹೊರಗೆ ಹಾಕಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಗ್ವಾಲಿಯರ್ ಹೊರವಲಯದ ವಿಪಿನ್ ಓಜಾ ಎಂಬ ವೃದ್ಧ ಬೈಸಿಕಲ್ ಸವಾರಿ ಮಾಡುವಾಗ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ
ಬಲಗಾಲು ಮುರಿದಿತ್ತು. ಕಾಲು ನೋವಿನ ಬಗ್ಗೆ ದೂರು ನೀಡಿದ ನಂತರ ವೃದ್ಧನನ್ನು ಆಸ್ಪತ್ರೆಗೆ ಸೊಸೆ ಕರೆದೊಯ್ದಿದ್ದಾರೆ. ಆದಾಗ್ಯೂ, ನಡೆಯಲು (Bad situation in hospital) ಸಾಧ್ಯವಾಗದ ವೃದ್ಧನನ್ನು ಸ್ಥಳಾಂತರಿಸಲು ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದ ಕಾರಣ ಏನು ಮಾಡಬೇಕೆಂದು ಅವಳಿಗೆ ತಿಳಿದಿರಲಿಲ್ಲ. ದಿಕ್ಕು ತೋಚದ ಸ್ಥಿತಿಯಲ್ಲಿ, ಅವಳು ಮುದುಕನನ್ನು ಬೆಡ್ ಶೀಟ್ ಮೇಲೆ ಕೂರಿಸಿ ಅವನನ್ನು ಎಳೆದುಕೊಂಡು ಹೋಗಿದ್ದಾಳೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ವಾಲಿಯರ್ ಮಂಡಲದಲ್ಲಿ 397 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಆಸ್ಪತ್ರೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಸರ್ಕಾರದ ವರ್ತನೆಯಿಂದ ಜನರು ತುಂಬಾ ಅಸಹನೆ ಹೊಂದಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆಯ ದುಃಸ್ಥಿತಿ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ಶ್ರೀ ಶಿವರಾಜ್ ಸಿಂಗ್ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯವು ಮಧ್ಯಪ್ರದೇಶದ ಆಡಳಿತ ಮತ್ತು ಸರ್ಕಾರದ ವರ್ತನೆಗೆ ಸಾಕ್ಷಿಯಾಗಿದೆ.

 

Leave A Reply