ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ ಫಲವಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

ಹೊಸ ದಿನ ಆರಂಭವಾಗುತ್ತಿದ್ದಂತೆ, ಎಲ್ಲರಲ್ಲೂ ಈ ದಿನ ನನ್ನ ಭವಿಷ್ಯ ಹೇಗಿರಬಹುದು? ಎಂಬ ಕುತೂಹಲ ಜೊತೆಗೆ ಸಣ್ಣ ಮಟ್ಟದ ಆತಂಕ ಮತ್ತು ಅಳುಕು ಇರುತ್ತದೆ. ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿದ್ದರೆ, ನಮ್ಮ ರಾಶಿ ಭವಿಷ್ಯವು ಚೆನ್ನಾಗಿರುತ್ತದೆ. ಇಂದಿನ ದಿನ, ಚಂದ್ರನು ಮೇಷ ರಾಶಿಯಲ್ಲಿದ್ದಾನೆ. ಸೂರ್ಯ ಮಕರ ರಾಶಿಯಲ್ಲಿದ್ದು, ಶನಿಯು ಕುಂಭ ರಾಶಿಯಲ್ಲಿದ್ದಾನೆ. ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಹಾಗಾದ್ರೆ 2023 ಜನವರಿ 26 ಗುರುವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭಫಲವಿದೆ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮೇಷ ರಾಶಿ:- ಚಂದ್ರನು ನಿಮ್ಮ ರಾಶಿಯಲ್ಲಿರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಲಾಭ ನೀಡುತ್ತಾನೆ. ಇಂದು ನಿಮ್ಮ ಮನಸ್ಸು ಆಧ್ಯಾತ್ಮಿಕದತ್ತ ವಾಲುತ್ತದೆ. ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ. ಅಲ್ಪ ಪ್ರಯತ್ನದಿಂದಲೇ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬಹುದು. ನಿಮಗೆ ಬಂದಿರುವ ಕೆಲಸಗಳು ಒಂದೊಂದಾಗಿಯೇ ಮುಕ್ತಾಯಗೊಳ್ಳುವುದು. ರಾಜಕಾರಣಿಗಳಿಗೆ ಲಾಭವಾಗಲಿದೆ. ದಾಂಪತ್ಯದಲ್ಲಿ ಜೀವನದಲ್ಲಿ ಸುಖವಿರಲಿದೆ. ಒತ್ತಡದ ಕೆಲಸಗಳನ್ನು ನಿರ್ವಹಿಸಬೇಕಾಗಬಹುದು. ಮೆಚ್ಚುಗೆಯು ನಿಮ್ಮ ಕೆಲಸಕ್ಕೆ ಸಿಗಲಿದೆ. ಮೇಲಧಿಕಾರಿಗಳ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ. ಉದ್ವಿಗ್ನಕ್ಕೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ. ಹಳದಿ ಮತ್ತು ಕೆಂಪು ಬಣ್ಣಗಳು ಶುಭ. ಶುಕ್ರ ಸಂಚಾರ ವಾಹನ ಖರೀದಿಗೆ ಶುಭ. ಮೇಷ ರಾಶಿಯವರು ತಂದೆಯ ಆಶೀರ್ವಾದವನ್ನು ಪಡೆಯುವುದರಿಂದ ಉತ್ತಮ ಫಲವನ್ನು ಪಡೆಯಬಹುದು.

ವೃಷಭ ರಾಶಿ:- ಚಂದ್ರ ಮತ್ತು ಗುರುವಿನ ದೆಸೆಯಿಂದ ಈ ದಿನ ಶುಭಕರವಾಗಿರುತ್ತದೆ. ಗುರು ಮೀನರಾಶಿಗೆ ಪ್ರವೇಶಿಸಿದೆ. ಮನಸ್ಸು ವ್ಯಾಪಾರದಲ್ಲಿ ನಿರತವಾಗಿರಬಹುದು. ಈ ರಾಶಿಯ ನವಮ ಭಾವದಲ್ಲಿರುವ ಶುಕ್ರ ಶುಭಕರವಾಗಿದ್ದು, ಧನ ಪ್ರಾಪ್ತಿಯಾಗುವ ಯೋಗ ಲಭಿಸಲಿದೆ. ಇಂದು ನಿಮ್ಮ ಮಾತು ನಿಮಗೆ ಲಾಭವನ್ನು ನೀಡುತ್ತದೆ. ವೈವಾಹಿಕ ಜೀವನ ಸುಂದರವಾಗಿರಲಿದೆ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ಸಹೋದರರ ಜೊತೆ ವಿವಾದಗಳು ಆಗಬಹುದು. ದೂರದ ಪ್ರಯಾಣವು ಸುಖದಾಯಕವಲ್ಲ ಧಾರ್ಮಿಕ ಸ್ಥಳಗಳ ಸಂದರ್ಶನ. ಗಣ್ಯ ವ್ಯಕ್ತಿಗಳ ಸಂಪರ್ಕ ಗೌರವ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಗುರುಹಿರಿಯರಿಂದ ಉತ್ತಮ ಸಲಹೆ ಸಹಕಾರ ಲಭ್ಯ. ಈ ರಾಶಿಗೆ ನೀಲಿ ಮತ್ತು ಹಸಿರು ಬಣ್ಣವು ಮಂಗಳಕರವಾಗಿದೆ. ಹಸುವಿಗೆ ಬಾಳೆಹಣ್ಣು ತಿನ್ನಿಸುವುದರಿಂದ ಶುಭ ಫಲ ನಿಮ್ಮದಾಗುತ್ತದೆ.

ಮಿಥುನ ರಾಶಿ:- ಶುಕ್ರ ನಿಮಗೆ ಆರ್ಥಿಕ ಮತ್ತು ಆರೋಗ್ಯ ಲಾಭವನ್ನು ನೀಡಬಹುದು. ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದಾಗಿ ಉದ್ಯೋಗ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಲಾಭವಾದೀತು. ಶರೀರಕ್ಕೆ ಅತಿಯಾಗಿ ಆಯಾಸವಾಗುವ ಕೆಲಸಗಳನ್ನು ಮಾಡಬೇಡಿ, ಅಶಕ್ತತೆಯು ಉಂಟಾಗಬಹುದು. ಕಛೇರಿಯಲ್ಲಿ ಕೆಲಸವು ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ‌. ಹೊಸ ಪ್ರೇಮವು ಅಂಕುರಿಸಬಹುದು. ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ. ನಂಬಿ ಮೋಸಹೋಗಬೇಡಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಬಿಳಿ ಮತ್ತು ನೀಲಿ ಬಣ್ಣಗಳು ಶುಭ. ಎಳ್ಳನ್ನು ದಾನ ಮಾಡಿರಿ ಉತ್ತಮ ಪ್ರತಿಫಲ ದೊರೆಯುತ್ತದೆ.

ಕರ್ಕ ರಾಶಿ:- ಇಂದಿನ ದಿನ, ಈ ರಾಶಿಯ ದಶಮ ಭಾವದಲ್ಲಿ ಚಂದ್ರನಿದ್ದಾನೆ. ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನವಾಗಿದೆ. ದಿನ ಉತ್ಸಾಹದಿಂದ ಕೂಡಿರಲಿದೆ ಮತ್ತು ವ್ಯಾಪಾರ, ವ್ಯವಹಾರದಲ್ಲಿ ಸ್ಥಿತಿ ಸಕಾರಾತ್ಮಕವಾಗಿರಲಿದೆ. ದೂರ ಪ್ರಯಾಣ, ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ, ಸಾಂಸಾರಿಕ ಜೀವನದಲ್ಲಿ ಸುಖ ವೃದ್ಧಿಯಾಗಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ನಿಂಮದಾಗುತ್ತದೆ. ಭೂಮ್ಯಾದಿ ವ್ಯವಹಾರಗಳಲ್ಲಿ ನಿರ್ಣಯ, ತೀರ್ಮಾನ. ಕೆಂಪು ಮತ್ತು ಕಿತ್ತಳೆ ಬಣ್ಣಗಳು ಮಂಗಳಕರವಾಗಿವೆ. ಹನುಮನನ್ನು ಆರಾಧಿಸಿ. ಕುಂಠಿತಗೊಂಡ ಯಾವುದೇ ಕೆಲಸವು ಪೂರ್ಣಗೊಳ್ಳುತ್ತದೆ. ಇದಕ್ಕಾಗಿ, ಅನ್ನದಾನ ಮಾಡಿರಿ ಹಾಗೂ ತಂದೆಯ ಆಶೀರ್ವಾದ ಪಡೆಯಿರಿ.

ಸಿಂಹ ರಾಶಿ:- ಸೂರ್ಯನ ಸ್ಥಿತಿ ನಿಮಗೆ ಮನೆಯ ಆರೋಗ್ಯ ಮತ್ತು ಸಂತೋಷದಲ್ಲಿ ಯಶಸ್ಸನ್ನು ನೀಡುತ್ತಾನೆ. ಆರ್ಥಿಕ ಸುಖ ವೃದ್ಧಿಯಾಗಲಿದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ನಿರೀಕ್ಷಿತ ಸ್ಥಾನ ಮಾನ ಪ್ರಾಪ್ತಿಯಾಗಲಿದೆ. ರಾಜಕೀಯ, ಸಹಕಾರಿ ವ್ಯವಹಾರಗಳಲ್ಲಿ ಅಭಿವೃದ್ಧಿ. ನಿರೀಕ್ಷಿತ ಧನ ಸಂಪತ್ತು ವೃದ್ಧಿಯಾಗಲಿದೆ. ಪರೋಪಕಾರದಿಂದ ಅಪವಾದ ತೊಂದರೆಯು ಸಂಭವವಿದೆ. ಹಾಗಾಗಿ, ವಿಚಾರಮಾಡಿ ತೀರ್ಮಾನಿಸಿದರೆ ನೆಮ್ಮದಿ. ಹಳದಿ ಕಿತ್ತಳೆ ಬಣ್ಣ ಶುಭಕರವಾಗಿದೆ. ಶ್ರೀ ಆದಿತ್ಯ ಹೃದಯಸ್ತೋತ್ರವನ್ನು 03 ಬಾರಿ ಪಠಿಸಿ ಬೆಲ್ಲ ಮತ್ತು ಗೋಧಿಯನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗಲಿದೆ.

ಕನ್ಯಾರಾಶಿ:- ಎಂಟನೇ ಭಾವದಲ್ಲಿನ ಚಂದ್ರ ಮತ್ತು ಏಳನೇ ಭಾವದಲ್ಲಿನ ಗುರು ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸ್ಥಾನದಲ್ಲಿದ್ದಾರೆ. ವ್ಯವಹಾರದಲ್ಲಿನ ಪ್ರಗತಿ ಸಂತೋಷವನ್ನು ನೀಡಲಿದೆ. ನಿಮಗೆ ಬರಬೇಕಾದ ಹಣ ಕೈಸೇರಲಿದೆ. ಆರ್ಥಿಕ ಲಾಭ ಸಾಧ್ಯ. ಉತ್ತಮ ವಾಕ್‌ ಚತುರತೆ, ಉದ್ಯೋಗ ವ್ಯವಹಾರಗಳಲ್ಲಿ ಬುದ್ಧಿವಂತಿಕೆ ನಡೆಯಿಂದ ಯಶಸ್ಸು, ಜನಮನ್ನಣೆ, ಗೌರವ ಪ್ರಾಪ್ತಿಯಾಗಲಿದೆ. ದಂಪತಿಗಳಲ್ಲಿ ಹೆಚ್ಚಿದ ಅನುರಾಗ. ತಂದೆಯ ಆಶೀರ್ವಾದ ಪಡೆಯಿರಿ. ಶಿವನನ್ನು ಪೂಜಿಸಿ. ಕಿತ್ತಳೆ,ಹಸಿರು ಬಣ್ಣಗಳು ಮಂಗಳಕರ. ಏಳು ಬಗೆಯ ಅನ್ನದಾನ ಮಾಡಿರಿ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

ತುಲಾ ರಾಶಿ:- ವ್ಯಾಪಾರದಲ್ಲಿನ ಪ್ರಗತಿ ಸಂತೋಷ ನೀಡಲಿದೆ. ಉದ್ಯೋಗದಲ್ಲಿ ಕಾರ್ಯಕ್ಷಮತೆಯಿಂದ ತೃಪ್ತರಾಗುವಿರಿ. ಕೌಟುಂಬಿಕ ಸುಖ ಹಾಗೂ ದಾಂಪತ್ಯದಲ್ಲಿ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ವರ್ತಕರಿಗೆ ಅವರವರ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಲಭಿಸಲಿದೆ. ವಿವಾಹ ಯೋಗವಿದೆ. ಆರೋಗ್ಯ ಸಂತೋಷಕ್ಕಾಗಿ ಹನುಮಾನ್ ಚಾಲಿಸಾ ಪಠಿಸಿ. ಇಂದು ಕರ್ಕ ರಾಶಿಯ ಸ್ನೇಹಿತರ ಸಹಕಾರ ನಿಮ್ಮನ್ನು ಆಶಾವಾದಿಯನ್ನಾಗಿ ಮಾಡುತ್ತದೆ. ಕೆಂಪು ಮತ್ತು ಹಳದಿ ಬಣ್ಣಗಳು ಶುಭ.

ವೃಶ್ಚಿಕ ರಾಶಿ:- ಚಂದ್ರ ಈ ರಾಶಿಯ ಅಂತಿಮ ಮತ್ತು ಶನಿ ಚತುರ್ಥ ಭಾವದಲ್ಲಿ ಸಂಚರಿಸುತ್ತಿದ್ದಾರೆ. ಹಾಗಾಗಿ, ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರು ಹಿರಿಯರ ಮೇಲಧಿಕಾರಿಗಳ ಪ್ರೀತಿ ವಿಶ್ವಾಸ ನಿಮಗೆ ಸಿಗಲಿದೆ. ಉತ್ತಮ ಧನಾರ್ಜನೆ. ಅಧ್ಯಯನಶೀಲರಿಗೆ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದಾಂಪತ್ಯದಲ್ಲಿ ಸುಖ ಅಭಿವೃದ್ಧಿ. ವಾಹನವನ್ನು ಖರೀದಿಸುವ ಲಕ್ಷಣಗಳಿವೆ. ಕೆಂಪು ಮತ್ತು ಆಕಾಶ
ಬಣ್ಣಗಳು ಶುಭ. ಕಂಬಳಿಗಳನ್ನು ದಾನ ಮಾಡಿ. ವಿಷ್ಣುವನ್ನು ಆರಾಧಿಸಿ. ತುಳಸಿಯ ಸಸಿಯನ್ನು ನೆಡಿ. ಇದರಿಂದ ಒಳ್ಳೆಯ ಪ್ರತಿಫಲ ನಿಮ್ಮದಾಗಲಿದೆ.

ಧನು ರಾಶಿ:- ಇಂದು ಚಂದ್ರನು ಈ ರಾಶಿಯಿಂದ ಪಂಚಮ ಭಾವದಲ್ಲಿದ್ದು, ಸೂರ್ಯನ ಕುಂಭ ಸಂಕ್ರಮಣ ಈ ರಾಶಿಯಲ್ಲಿದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಶುಭ ವಾರ್ತೆ ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ಎದುರಾಗಲಿವೆ, ಹಾಗಾಗಿ ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನ ಹರಿಸಲು ಏಕಾಗ್ರತೆಯನ್ನು ಬೆಳೆಸಿಕೊಳ್ಳುವತ್ತ ಪ್ರಯತ್ನ ನಡೆಸಿ. ಹಳದಿ ಕಿತ್ತಳೆ ಬಣ್ಣಗಳು ಶುಭ.ಉದ್ಯೋಗದಲ್ಲಿ ಸಂತಸದ ವಾತಾವರಣವಿರುತ್ತದೆ. ಬೇಳೆ ಕಾಳು ದಾನ ಮಾಡಿದರೆ ಧನು ರಾಶಿಯವರಿಗೆ ಶುಭಫಲ ಲಭಿಸಲಿದೆ.

ಮಕರ ರಾಶಿ:- ಈ ರಾಶಿಯಲ್ಲಿ ಚಂದ್ರ ಚತುರ್ಥ ಭಾವದಲ್ಲಿದ್ದು, ವ್ಯಾಪಾರ ವ್ಯವಹಾರದಲ್ಲಿ ಲಾಭವನ್ನು ನೀಡಲಿದ್ದಾನೆ. ನೀವು ಧಾರ್ಮಿಕ ಪ್ರಯಾಣಕ್ಕೆ ಹೋಗಬಹುದು. ಭೂಮಿಯ ವ್ಯವಹಾರದಲ್ಲಿ ನಿಮಗೆ ಜಯವಾಗಬಹುದು. ನಿಮ್ಮ ವರ್ಚಸ್ಸಿಗೆ ಹೆದರಿ ನಿಮ್ಮ ಶತ್ರುಗಳು ಶರಣಾಗಲೂಬಹುದು. ಉದ್ಯೋಗದ ನಿಮಿತ್ತ ಪ್ರಯಾಣವಿರಲಿದೆ. ತಂದೆಯ ಆಶೀರ್ವಾದದಿಂದ ಲಾಭವನ್ನು ಪಡೆಯುವಿರಿ. ಹಸಿರು ಮತ್ತು ನೇರಳೆ ಬಣ್ಣವು ಮಂಗಳಕರವಾಗಿದೆ. ಉಣ್ಣೆಯ ಬಟ್ಟೆಗಳನ್ನು ದಾನ ಮಾಡಿ. ಹನುಮಂತನನ್ನು ಆರಾಧಿಸಿರಿ ನಿಮಗೆ ಶುಭವಾಗುತ್ತದೆ.

ಕುಂಭ ರಾಶಿ:- ರಾಜಕಾರಣಿಗಳು ಯಶಸ್ವಿಯಾಗುತ್ತಾರೆ. ಉದ್ಯೋಗದಲ್ಲಿ ಯಶಸ್ಸು ಮತ್ತು ಕೆಲಸದಲ್ಲಿನ ಅಡೆತಡೆಗಳಿಂದ ಮುಕ್ತಿ ಸಿಗಲಿದೆ. ಉದ್ಯೋಗ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗಬಹುದು. ಆದಾಯದ ತಂತ್ರಗಳನ್ನು ನೀವು ಮಾಡುವವರಿದ್ದೀರಿ. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ವಾರ್ತೆಯನ್ನು ಕೇಳುವವರಿದ್ದಾರೆ. ಅಧಿಕ ಆಹಾರವನ್ನು ಸೇವಿಸುವ ಮನಸ್ಸು ಮಾಡುವಿರಿ. ಮಾತನಾಡುವಾಗ ಯಾರ ಜೊತೆ ಮಾತನಾಡುತ್ತಿದ್ದೇನೆ ಎನ್ನುವ ಜ್ಞಾನವೂ ಇರಲಿ. ಸಪ್ತಶ್ಲೋಕಿ ದುರ್ಗಾ 09 ಬಾರಿ ಪಠಿಸಿರಿ. ನೇರಳೆ ಮತ್ತು ಹಸಿರು ಬಣ್ಣ ಶುಭ. ಪಾಲಕ್ ಸೊಪ್ಪನ್ನು ಹಸುವಿಗೆ ತಿನ್ನಿಸಿ ಹಾಗೂ ಹೆಸರು ಬೇಳೆಯನ್ನು ದಾನ ಮಾಡಿ.

ಮೀನ ರಾಶಿ:- ಚಂದ್ರನು ನಿಮ್ಮ ದ್ವಿತೀಯ ಭಾವದಲ್ಲಿ ಸಂಚರಿಸುತ್ತಿದ್ದಾನೆ ಈ ರಾಶಿಯಿಂದ 12 ನೇ ಭಾವದಲ್ಲಿ ಶನಿ ಇದ್ದು, ಗುರು ಸಂಪತ್ತನ್ನು ದಯಪಾಲಿಸಲಿದ್ದಾನೆ. ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಯಶಸ್ಸಿನ ಲಕ್ಷಣಗಳಿವೆ, ಅವರು ತಮ್ಮ ಕಾರ್ಯಕ್ಷಮತೆಯಿಂದ ತ್ರುಪ್ತರಾಗಲಿದ್ದಾರೆ. ಉದ್ಯೋಗದಲ್ಲಿ ಸಂತಸವಿದ್ದು ಬಹಳ ಆನಂದದಿಂದ ಮಾಡುವಿರಿ. ಹಳದಿ ಮತ್ತು ಕಿತ್ತಳೆ ಬಣ್ಣಗಳು ಮಂಗಳಕರ. ಧಾರ್ಮಿಕ ಪುಸ್ತಕಗಳನ್ನು ದಾನ ಮಾಡುವುದರಿಂದ ನಿಮ್ಮೆಲ್ಲಾ ಸಮಸ್ಯೆಗಳು ದೂರವಾಗುತ್ತದೆ.

Leave A Reply

Your email address will not be published.