Homelatestರಾಜಕೀಯ ರಾಡಿ ಎಬ್ಬಿಸುತ್ತಿರುವ ಸ್ಯಾಂಟ್ರೋ ರವಿ ಕೇಸ್ ನಲ್ಲಿ ಬಿಗ್ ಟ್ವಿಸ್ಟ್! ಹೆಂಡತಿಯೇ ಬಿಚ್ಚಿಟ್ಟಳು ಕರಾಳ...

ರಾಜಕೀಯ ರಾಡಿ ಎಬ್ಬಿಸುತ್ತಿರುವ ಸ್ಯಾಂಟ್ರೋ ರವಿ ಕೇಸ್ ನಲ್ಲಿ ಬಿಗ್ ಟ್ವಿಸ್ಟ್! ಹೆಂಡತಿಯೇ ಬಿಚ್ಚಿಟ್ಟಳು ಕರಾಳ ಸತ್ಯ

Hindu neighbor gifts plot of land

Hindu neighbour gifts land to Muslim journalist

ರಾಜಕೀಯದಲ್ಲಿ ರಾಡಿ ಎಬ್ಬಿಸುತ್ತಿರುವ ಸ್ಯಾಂಟ್ರೋ ರವಿ ಕೇಸ್ ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಎಬ್ಬಿಸುತ್ತಿದೆ. ಇದೀಗ ಈ ರವಿಯ ಕೇಸಿನಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಭಾರಿ ಸಂಚಲನ ಸೃಷ್ಟಿಸಿದ ಸ್ಯಾಂಟ್ರೋ ರವಿ ಕಹಾನಿಗೆ ಕಾರಣ ಇಲ್ಲಿದೆ ನೋಡಿ.

ವೇಶ್ಯಾವಾಟಿಕೆ ದಂಧೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿ ಏಳು ದಿನಗಳ ಕಳೆದರೂ ಪೊಲೀಸರಿಗೆ ಆರೋಪಿ ಸ್ಯಾಂಟ್ರೋ ರವಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಸಲ್ಲಿಸಿರುವ ಸ್ಯಾಂಟ್ರೋ ರವಿ, ಪೊಲೀಸರ ಕಣ್ಣಿಗೆ ಬೀಳದೆ ತಲೆಮರೆಸಿಕೊಳ್ಳುತ್ತಿದ್ದಾನೆ.

ದಿನಗಳು ಉರುಳುತ್ತಿದ್ದಂತೆ ಸ್ಯಾಂಟ್ರೋ ರವಿಯ ಒಂದೊಂದು ಬೆಚ್ಚಿಬೀಳಿಸುವ ಮಾಹಿತಿ ಹೊರಬೀಳುತ್ತಲೇ ಇದೆ. ಹಲವು ಯುವತಿಯರಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಇದೀಗ ಕೇಳಿಬರಲು ಆರಂಭವಾಗಿದೆ. ಹಣದ ಆಸೆ ತೋರಿಸಿ ವೈದ್ಯರನ್ನು ಬಳಸಿಕೊಂಡು ಈ ರೀತಿಯಾಗಿ ಮಾಡುತ್ತಿದ್ದನಂತೆ. ಒಂದು ಬಾರಿ ಪರಿಚಯವಾದ ವೈದ್ಯರಿಂದ ಕನಿಷ್ಟ 5 ಜನರಿಗೆ ಮಾತ್ರ ಗರ್ಭಪಾತ ಮಾಡಿಸುತ್ತಿದ್ದನಂತೆ. ನಂತರ ಬೇರೊಬ್ಬರ ವೈದ್ಯರನ್ನು ಪರಿಚತ ಮಾಡಿಕೊಂಡು ಗರ್ಭಪಾತ ನಡೆಸುತ್ತಿದ್ದನಂತೆ.

ತಾನು ಪಾರಾಗುವ ದಾರಿ ಹುಡುಕಿ ಸ್ಯಾಂಟ್ರೋ ರವಿ ತನ್ನ ಹೆಂಡತಿಯ ಮೇಲೆಯೇ ಪೋಲೀಸ್ ಠಾಣೆಯಲ್ಲಿ ದೂರು ದಾಖಸಿದ್ದನಂತೆ. ಇದಕ್ಕೆ ತನ್ನ ಸ್ನೇಹಿತ ಶ್ರೀಪ್ರಕಾಶ್ ಎಂಬ ವ್ಯಕ್ತಿಯನ್ನು ಬಳಸಿಕೊಂಡು ಅವನ ಮೂಲಕ ದೂರು ಕೊಡಿಸಿದ್ದ. ತನ್ನ ಎಲ್ಲಾ ಅನಾಚಾರಗಳ ದಾಖಲೆಯನ್ನು ಹೊಂದಿದ ಲ್ಯಾಪ್ ಟಾಪ್ ಹೆಂಡತಿ ಕೈ ಸೇರಿತ್ತು.

ತನ್ನ ಪತ್ನಿ ಬಳಿ ಇದ್ದ ಲ್ಯಾಪ್​ಟಾಪ್ ತನ್ನ ಕೈ ಸೇರಲು ಸ್ಯಾಂಟ್ರೋ ರವಿ ಪತ್ನಿ ವಿರುದ್ಧವೇ ಷಡ್ಯಂತ್ರ ರೂಪಿಸುತ್ತಾನೆ. ಇದಕ್ಕಾಗಿ ವರ್ಗಾವಣೆಯಾಗುವ ತಲೆಬಿಸಿಯಲ್ಲಿದ್ದ ಕಾಟನ್​ಪೇಟೆ ಠಾಣಾ ಇನ್ಸ್​ಪೆಕ್ಟರ್​ ಪ್ರವೀಣ್​ ಅವರನ್ನು ಬಳಕೆ ಮಾಡಿಕೊಳ್ಳುತ್ತಾನೆ. ವರ್ಗಾವಣೆ ತಡೆ ಆಮಿಷವೊಡ್ಡಿ ಇನ್ಸ್​​ಪೆಕ್ಟರ್ ಮೂಲಕ ಫೇಕ್ ಪ್ರಕರಣ ದಾಖಲಿಸಿಕೊಳ್ಳುತ್ತಾನೆ. ಅದರಂತೆ ಇನ್ಸ್​ಪೆಕ್ಟರ್ ಮೂವರು ಅಮಾಯಕರನ್ನು ಬಂಧಿಸುತ್ತಾರೆ.

ಶ್ರೀಪ್ರಕಾಶ್ ನೀಡಿದ ಸುಳ್ಳು ದೂರಿನ ಪ್ರಕಾರ ಸ್ಯಾಂಟ್ರೋ ರವಿ ಪತ್ನಿ ಆರ್ಥಿಕ ಸಮಸ್ಯೆ ಹೇಳಿಕೊಂಡು ತನ್ನ ಬಳಿಯಿಂದ 5 ಲಕ್ಷ ಸಾಲು ಪಡೆದು ಮೂರು ತಿಂಗಳಲ್ಲಿ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಸಂಬಂಧ ಒಂದು ಚೆಕ್, ಪಾಸ್​​ಬುಕ್ ಜೆರಾಕ್ಸ್ ಸಹ ನೀಡಿದ್ದರು. ನವೆಂಬರ್ 23ರಂದು ಕರೆ ಮಾಡಿ ಹಣ ವಾಪಸ್ ನೀಡುವುದಾಗಿ ಹೇಳಿ ಮೆಜೆಸ್ಟಿಕ್ ಬಳಿ ರಾತ್ರಿ ಮಳೆ ಬರುತ್ತಿದ್ದಾಗ ಕರೆಸಿಕೊಂಡಿದ್ದಾರೆ. ನಂತರ ರೈಲು ನಿಲ್ದಾಣದಿಂದ ಕೊಂಚ ಮುಂದೆ ಕರೆಸಿಕೊಂಡು ಹಣ ಕೊಡದೇ ಹಲ್ಲೆ ನಡೆಸಿ ತನ್ನ ಬಳಿ ಇದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ತಾವೆ ಸೃಷ್ಟಿಸಿದ ದೂರುದಾರ ಶ್ರೀಪ್ರಕಾಶ್ ನೀಡಿದ ದೂರಿನ ಅನ್ವಯ ಎಫ್​ಐಆರ್​ ದಾಖಲಿಸಿಕೊಂಡ ಕಾಟನ್ ಪೇಟೆ ಠಾಣಾ ಇನ್​​ಸ್ಪೆಕ್ಟರ್ ಪ್ರವೀಣ್, ರವಿ ಪತ್ನಿ, ಮತ್ತೋರ್ವ ಮಹಿಳೆ ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸುತ್ತಾರೆ. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಅಮಾಯಕರು ಇದೀಗ ಜೈಲುವಾಸ ಅನುಭವಿಸಿ ಹೊರಬಂದ ಇವರು ರವಿ ವಿರುದ್ಧ ವಂಚನೆ, ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಿಸುತ್ತಾರೆ. ಇದು ಸ್ಯಾಂಟ್ರೋ ರವಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಇದಾದ ಬಳಿಕ ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಭಾರೀ ಚರ್ಚೆಗೆ ಕಾರಣವಾಗುತ್ತಾನೆ. ಪೋಲಿಸರು ಆತನ ಬೇಟೆಯಲ್ಲಿ ಬ್ಯುಸಿಯಾಗಿದ್ದಾರೆ.

RELATED ARTICLES

Most Popular

Recent Comments