ಪಡಿತರ ಚೀಟಿದಾರರೇ ಗಮನಿಸಿ | ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಮಹತ್ವದ ಮಾಹಿತಿ | ಕೇಂದ್ರದಿಂದ ಹೊಸ ಯೋಜನೆ ಜಾರಿ

ಹೊಸ ಪಡಿತರ ಚೀಟಿ ಪಡೆಯಲು ನೀವು ಬಯಸಿದ್ರೆ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ತಂದಿದೆ. ಕೇಂದ್ರದ ಹೊಸ ಯೋಜನೆಯ ಪ್ರಕಾರ, ನೀವು ಪಡಿತರವನ್ನು ‘ಮೇರಾ ರೇಷನ್ ಮೇರಾ ಅಧಿಕಾರ್’ ಕಾರ್ಯಕ್ರಮದ ಅಡಿಯಲ್ಲಿ ನೋಂದಾಯಿಸಬೇಕು. ಈ ನೋಂದಣಿ ಸೌಲಭ್ಯವನ್ನು ಸರ್ಕಾರವು ಆಗಸ್ಟ್ 5ರಂದು ಪ್ರಾರಂಭಿಸಿದ್ದು, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 11 ರಾಜ್ಯಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲು ಪ್ರಾರಂಭಿಸಿದೆ.

ಈ ಸೌಲಭ್ಯವನ್ನು ಪ್ರಾರಂಭಿಸಿದ ನಂತರ ಸುಮಾರು 13,000 ಜನರು ಈ ಸೌಲಭ್ಯಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ವಸತಿ ರಹಿತರು, ಕಡು ಬಡವರು, ವಲಸಿಗರು ಮತ್ತು ಇತರ ಅರ್ಹ ಫಲಾನುಭವಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇನ್ನೂ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನ ಕಾರ್ಯಕ್ರಮದಲ್ಲಿ ಸೇರಿಸಲು ಪರಿಗಣನೆಯಲ್ಲಿದೆ. ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್, ತೆಲಂಗಾಣ, ಪುದುಚೇರಿ, ಸಿಕ್ಕಿಂ ಮತ್ತು ಉತ್ತರ ಪ್ರದೇಶಗಳೊಂದಿಗೆ ಸಾಮಾನ್ಯ ನೋಂದಣಿ ಸೌಲಭ್ಯದ ವ್ಯಾಪ್ತಿಯನ್ನು ಒದಗಿಸಲಾಗುವುದು. ಈ ರಾಜ್ಯಗಳಲ್ಲಿ ಸಾಮಾನ್ಯ ನೋಂದಣಿ ಸೌಲಭ್ಯಕ್ಕಾಗಿ ಸಿದ್ಧತೆಗಳನ್ನು ಪರಿಗಣಿಸಲಾಗುತ್ತಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳನ್ನ ತ್ವರಿತವಾಗಿ ಗುರುತಿಸುವುದು ಜಂಟಿ ನೋಂದಣಿಯ ಉದ್ದೇಶವಾಗಿದೆ ಎಂದು ಡಿಎಫ್ರಿಡಿ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದರು.

ಎನ್ಎಎಫ್‌ಎಸ್ಎ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಕೂಲಕ್ಕಾಗಿ ಕಾರ್ಯದರ್ಶಿ (DFPD) 2022ರ ಆಗಸ್ಟ್ 5ರಂದು ಅಸ್ಸಾಂ, ಗೋವಾ, ಲಕ್ಷದ್ವೀಪ, ಮಹಾರಾಷ್ಟ್ರ ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ತ್ರಿಪುರಾ ಮತ್ತು ಉತ್ತರಾಖಂಡ್ 11 ರಾಜ್ಯಗಳಿಗೆ ವೆಬ್ ಆಧಾರಿತ ನೋಂದಣಿ ಸೌಲಭ್ಯವನ್ನು (ಮೇರಾ ರೇಷನ್ ಮೇರಾ ಅಧಿಕಾರ್) ಪ್ರಾರಂಭಿಸಿದ್ದು, ಈ ಸೌಲಭ್ಯವು https://nfsa.gov.in ನಲ್ಲಿ ಲಭ್ಯವಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ದೇಶಾದ್ಯಂತ ಸುಮಾರು 81.35 ಕೋಟಿ ಜನರಿಗೆ ಗರಿಷ್ಠ ಸೌಲಭ್ಯ ನೀಡಲಾಗುತ್ತದೆ.

Leave A Reply

Your email address will not be published.