HomeInterestingಕಸಗುಡಿಸುತ್ತಾ ಜೀವನ ಸಾಗಿಸುತ್ತಿದ್ದವನ ಖಾತೆಯಲ್ಲಿತ್ತು 70 ಲಕ್ಷ ರೂ. ; ಆತ ಸತ್ತ ಮೇಲೆನೇ...

ಕಸಗುಡಿಸುತ್ತಾ ಜೀವನ ಸಾಗಿಸುತ್ತಿದ್ದವನ ಖಾತೆಯಲ್ಲಿತ್ತು 70 ಲಕ್ಷ ರೂ. ; ಆತ ಸತ್ತ ಮೇಲೆನೇ ಸತ್ಯ ಹೊರಕ್ಕೆ ಗೊತ್ತಾಗಿದ್ದು!

Hindu neighbor gifts plot of land

Hindu neighbour gifts land to Muslim journalist

ಮುಂದಿನ ಉತ್ತಮವಾದ ಜೀವನಕ್ಕೆ ಪ್ರತಿಯೊಬ್ಬರೂ ಕೂಡ ಹಣವನ್ನು ಸೇವ್ ಮಾಡುತ್ತಾರೆ. ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ ಕಷ್ಟ ಕಾಲಕ್ಕೆ ಎಂದು ಕೂಡಿಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಕಸ ಗುಡಿಸುವ ಕೆಲಸದಾಳುವಿನ ಅಕೌಂಟ್‌ನಲ್ಲಿ 70 ಲಕ್ಷ ರೂ. ಹಣ ಸಂಗ್ರಹವಾಗಿದೆ. ಆದ್ರೆ, ಆತನೋರ್ವ ಶ್ರೀಮಂತ ಎಂದು ತಿಳಿದು ಬಂದಿದ್ದು ಮಾತ್ರ ಸತ್ತ ಮೇಲೆ!

ಹೌದು. ಈತನ ಹೆಸರು ಧೀರಜ್‌. ಪ್ರಯಾಗ್‌ರಾಜ್‌ ಸಂಗಮ್‌ ಸಿಟಿಯಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಕಚೇರಿಯ ಕುಷ್ಠರೋಗ ವಿಭಾಗದ ಮಿಲಿಯನೇರ್‌ ವ್ಯಕ್ತಿ ಈತ. ಧೀರಜ್‌ನ ತಂದೆ ಕೂಡ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ತಂದೆ ಕೆಲಸದಲ್ಲಿರುವಾಗಲೇ ಸಾವು ಕಂಡಿದ್ದರು. ಆ ಬಳಿಕ ಅನುಕಂಪದ ಅಧಾರದ ಮೇಲೆ ಈ ಕೆಲಸ ಸಿಕ್ಕಿತ್ತು. ಧೀರಜ್‌ನ ತಂದೆ ಕೂಡ ಎಂದಿಗೂ ತನ್ನ ಸಂಬಳವನ್ನು ಖಾತೆಯಿಂದ ತೆಗೆದಿರಲಿಲ್ಲ. ಅದೇ ಹಾದಿಯಲ್ಲಿ ಸಾಗಿದ ಮಗ ಕೂಡ ಕಳೆದ 10 ವರ್ಷದಿಂದ ತನ್ನ ಸಂಬಳವನ್ನು ತೆಗೆದಿರಲಿಲ್ಲ.

ಕಳೆದ 10 ವರ್ಷಗಳಿಂದ ಈ ಹಣ ತೆಗೆದುಕೊಳ್ಳದ ಕಾರಣಕ್ಕಾಗಿ ಅಕೌಂಟ್‌ನಲ್ಲಿ 70 ಲಕ್ಷವಾಗಿ ಬೆಳೆದಿತ್ತು. ಅಷ್ಟು ಹಣವಿದ್ದರೂ ಈತ ಮಾತ್ರ ಭಿಕ್ಷೆ ಬೇಡುವ ಮೂಲಕ, ತಾಯಿಯ ಪಿಂಚಣಿ ಹಣದ ಮೂಲಕ ಜೀವನ ಸಾಗಿಸುತ್ತಿದ್ದ. ಆದ್ರೆ ಈತ ಕೊನೆಗೆ ಟಿಬಿ ಕಾಯಿಲೆಗೂ ತುತ್ತಾಗಿದ್ದಾನೆ. ಆ ಕ್ಷಣದಲ್ಲೂ ಈ ಹಣವನ್ನು ತೆಗೆದಿರಲಿಲ್ಲ. ಕೊನೆಗೆ ಇದೇ ಕಾಯಿಲೆಯಿಂದಾಗಿ ಶನಿವಾರ ಸಾವು ಕಂಡಿದ್ದಾರೆ.

ಇಂತಹ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಧೀರಜ್ ಪ್ರಯಾಗರಾಜ್ ಜಿಲ್ಲಾ ಕುಷ್ಠರೋಗ ಇಲಾಖೆಯಲ್ಲಿ ಕಸಗುಡಿಸುವುದು ಮಾತ್ರವಲ್ಲ, ವಾಚ್‌ಮನ್‌ ಆಗಿಯೂ ಕೆಲಸ ಮಾಡುತ್ತಿದ್ದರು. ಆದಾಯ ತೆರಿಗೆಯನ್ನೂ ಕೂಡ ಈತ ಕಟ್ಟುತ್ತಿದ್ದ. ಇದೇ ವರ್ಷದ ಆರಂಭದಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಈತನ ಕಚೇರಿಗೆ ಬಂದು ಈತನನ್ನು ಹುಡುಕುವವರೆಗೂ, ಈತನೊಬ್ಬ ಶ್ರೀಮಂತ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಧೀರಜ್‌ ಧರಿಸುವ ಕೊಳೆಯಾದ ಬಟ್ಟೆಗಳು ಹಾಗೂ ಆತನ ವೇಷಭೂಷಣ ನೋಡಿದ ಎಲ್ಲರೂ ಆತನನ್ನು ಭಿಕ್ಷುಕ ಎಂದುಕೊಂಡಿದ್ದರು.

ಅಷ್ಟೇ ಅಲ್ಲದೆ ಈತ, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಗಳ ಕಾಲಿಗೆ ಬಿದ್ದು, ಗೋಗೆರೆದು ಹಣ ಪಡೆಯುತ್ತಿದ್ದ. ಅವರೂ ಕೂಡ ಈತ ಬಡವ ಇರಬೇಕು ಎಂದುಕೊಂಡು ಹಣ ನೀಡುತ್ತಿದ್ದರು. ಆದರೆ, ಬ್ಯಾಂಕ್‌ನ ಅಧಿಕಾರಿಗಳು ಬಂದು ಧೀರಜ್‌ನ ಬಗ್ಗೆ ತಿಳಿಸಿದಾಗ ಸ್ವತಃ ಆಸ್ಪತ್ರೆಯ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ. ಈ ವೇಳೆ ಈತ ಭಿಕ್ಷುಕನಲ್ಲ, ಇಲ್ಲಯ ನೌಕರ ಹಾಗೂ ಆದಾಯ ತೆರಿಗೆ ಕಟ್ಟುವಷ್ಟು ಹಣ ಈತನಲ್ಲಿದೆ ಎನ್ನುವುದು ಅಲ್ಲಿನ ಸಿಬ್ಬಂದಿಗಳು ಹಾಗೂ ರೋಗಿಗಳಿ ತಿಳಿದಿದೆ.

10 ವರ್ಷಗಳಿಂದ ಧೀರಜ್‌ ಒಂದೇ ಒಂದು ದಿನಕ್ಕೂ ಬ್ಯಾಂಕ್‌ನಿಂದ ತಮ್ಮ ಸಂಬಳದ ಹಣವನ್ನು ವಿತ್‌ಡ್ರಾ ಮಾಡಿಲ್ಲ ಎಂದು ಸ್ವತಃ ಬ್ಯಾಂಕರ್‌ಗಳು ಈ ವೇಳೆ ಹೇಳಿದ್ದರು. ಇಂಥ ಹೆಸರಿನ ವ್ಯಕ್ತಿಯೊಬ್ಬ ಇದ್ದಾನೆಯೇ ಅಥವಾ ಇವನ ಹೆಸರಿನಲ್ಲಿರುವ ಬೇರೆ ಅಕೌಂಟ್‌ ಇದಾಗಿರಬಹುದೇ ಎನ್ನುವ ಅನುಮಾನದಲ್ಲಿ ಬ್ಯಾಂಕರ್‌ಗಳು ಬಂದಿದ್ದರು.

ಧೀರಜ್‌ ಸ್ವಂತ ಮನೆ ಕೂಡ ಹೊಂದಿದ್ದಾನೆ. ಇದಲ್ಲದೆ, ತಾಯಿಯ ಹೆಸರಿಗೆ ಪಿಂಚಣಿ ಕೂಡ ಬರುತ್ತಿತ್ತು. 80 ವರ್ಷದ ತಾಯಿಯ ಜೊತೆ ವಾಸವಾಗಿದ್ದರು. ಎಂದಿಗೂ ಧೀರಜ್‌ಗೆ ತಾವು ಮದುವೆಯಾಗಬೇಕು ಎಂದು ಬಯಸಿರಲಿಲ್ಲ. ಮದುವೆಯಾದಲ್ಲಿ ಬರುವ ಹುಡುಗಿ ಹಣದ ಮೇಲೆ ಆಸೆ ಪಡಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದ. ಸಹೋದ್ಯೋಗಿಗಳ ಪ್ರಕಾರ, ಧೀರಜ್ ಮಾನಸಿಕವಾಗಿ ಸ್ವಲ್ಪ ದುರ್ಬಲರಾಗಿದ್ದರು, ಆದರೆ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಕೆಲಸವನ್ನು ಪೂರ್ಣಗೊಳಿಸುತ್ತಿದ್ದರು. ಒಟ್ಟಾರೆ ಸತ್ತ ಮೇಲೆ ಆತ ಶ್ರೀಮಂತ ಎಂದು ತಿಳಿದು ಬಂದಿದ್ದೆ ವಿಶೇಷ…

RELATED ARTICLES

Most Popular

Recent Comments