ಹೃದಯವಂತನ ಹೃದಯ ಮಿಡಿದಿದೆ । ಕೊರೋನಾ ವೈರಸ್ ನಿಂದ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ರಜನಿಕಾಂತ್ ರೂ.50 ಲಕ್ಷ ಕೊಡುಗೆ

ವೈರಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ತಮಿಳುನಾಡು ಸರ್ಕಾರ ಇಡೀ ರಾಜ್ಯವನ್ನು ಬಂದ್ ಮಾಡಿ ಕೂತಿದೆ. ಚಮಕಿನ ಸಿನಿಮಾ ರಂಗದಲ್ಲೂ ಕೂಡ ದಿನದ ದುಡಿಮೆ ದುಡಿದು ಅನ್ನ- ಸಾರು ತಿನ್ನುವ ಬಡವರಿದ್ದಾರೆ. ಅನಂತವರ ಸಂಕಷ್ಟ ಮನಗಂಡ ಸೂಪರ್ ಸ್ಟಾರ್ ರಜನಿಕಾಂತ್ ಅವರು, 50 ಲಕ್ಷ ದೇಣಿಗೆ ನೀಡಿ ಒಂದಷ್ಟು ಸಹಾಯ ಹಸ್ತ ಚಾಚಿದ್ದಾರೆ.

ತಮಿಳುನಾಡು ರಾಜ್ಯವನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ ಯೂನಿಯನ್ ನ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಭಾರೀ ಸಂಕಷ್ಟಕ್ಕೀಡಾಗಿದ್ದು, ತನ್ನನ್ನು ಗುರುತಿಸಿ ಬೆಳೆಸಿ ಸೂಪರ್ ಸ್ಟಾರ್ ಮಾಡಿದ ‘ ತಂಬಿ- ತಂಗಚ್ಚಿ ‘ ಗಳಿಗೆ ರಜನಿಕಾಂತ್ ಅವರು ಈ ದೇಣಿಗೆ ನೀಡಿದ್ದಾರೆ.
ಇಂತಹ ಹೃದಯವಂತಿಕೆ ನಮ್ಮಲ್ಲಿ ಎಷ್ಟು ಜನರಿಗಿದೆಯೋ ಗೊತ್ತಿಲ್ಲ. ರಜನಿಕಾಂತ್ ಅವರು ಪದೇ ಪದೇ, ಡೌನ್ ಟು ಅರ್ತ್ ಆಗಿದ್ದು ಚಾರಿಟಿಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲರಿಗಿಂತ ಮೊದಲು 50 ಲಕ್ಷ ಮೊತ್ತವನ್ನು ನೀಡಿ, ಬೇರೆಯವರೂ ಆ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿದ್ದಾರೆ.

Leave A Reply

Your email address will not be published.