Home latest ಕಚ್ಚಾ ಬಾದಾಮ್ ಹಾಡುಗಾರ ಭುವನ್ ಕಾರು ಅಪಘಾತ: ಆಸ್ಪತ್ರೆಗೆ ದಾಖಲು

ಕಚ್ಚಾ ಬಾದಾಮ್ ಹಾಡುಗಾರ ಭುವನ್ ಕಾರು ಅಪಘಾತ: ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

ಪಶ್ಚಿಮ ಬಂಗಾಳದ ಬಿರ್ ಭಮ್ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಕಚ್ಚಾ ಬಾದಾಮ್ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರಡು ಕಾಸು ಸಂಪಾದನೆ ಮಾಡುತ್ತಿದ್ದ ವ್ಯಕ್ತಿ. ಇತ್ತೀಚೆಗೆ ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲಿ ನೋಡಿದರೂ, ಕೇಳಿದರೂ ಬರೀ ಈ ಹಾಡೇ ಗುನುಗುನುವುದು ಕಾಣಿಸುತ್ತದೆ. ಯೂಟ್ಯೂಬ್ ನಲ್ಲಿ ಬರೋಬ್ಬರಿ 50 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಈ ಹಾಡಿನಿಂದ ಭುವನ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದಾರೆ.

ಇಂತಿಪ್ಪ ಈ ಹಾಡುಗಾರ ಭುವನ್ ಬದ್ಯಕರ್ ಸೋಮವಾರ ( ಫೆ.28) ರಾತ್ರಿ ಕಾರು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಚ್ಚಾ ಬಾದಾಮ್ ಹಾಡಿನ ಮೂಲಕ ಗಳಿಸಿದ ಹಣದಿಂದ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದಾರೆ. ಹಾಗಾಗಿ ಅದನ್ನು ಕಲಿಯುವ ಸಮಯದಲ್ಲಿ ಅಪಘಾತವಾಗಿದ್ದು, ಎದೆಗೆ ನೋವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ಹಾಗೂ ಕುಟುಂಬಸ್ಥರು ಶೀಘ್ರ ಗುಣಮುಖರಾಗಲು ಪ್ರಾರ್ಥನೆ ಮಾಡುತ್ತಿದ್ದಾರೆ.