ಬಾಡಿತು ಭಾವೈಕ್ಯತೆ ಸಾರುವ ಸಾಮಾಜಿಕ ಕಳಕಳಿಯ ಹೆಮ್ಮರ!! ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ!!

ಪದ್ಮಶ್ರೀ ಪುರಸ್ಕೃತ, ವೈದಿಕ ವಚನ ಭಜನೆಗಳ ಮೂಲಕ ಹಿಂದೂ ಮುಸ್ಲಿಂ ಎರಡೂ ಸಮುದಾಯದ ಜನರಲ್ಲಿ ಭಾವಕ್ಯತೆ ಮೂಡಿಸುತ್ತಿದ್ದ ಇಬ್ರಾಹಿಂ ಸುತಾರ ಹೃದಯಘಾತದಿಂದ ಮೃತರಾದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದವರಾದ ಇಬ್ರಾಹಿಂ ಸುತಾರ, ಹಲವು ವರ್ಷಗಳಿಂದ ಭಾವೈಕ್ಯತೆಯ ಸಾರುವ ಭಜನೆ ವಚನ ವಾಚನ ನಡೆಸುತ್ತಿದ್ದರು. ಇವರ ಸಾಮಾಜಿಕ ಸೇವೆಯನ್ನು 2018 ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿತ್ತು. 1970 ರಲ್ಲಿ ತನ್ನದೇ ಜಾನಪದ ಸಂಗೀತ ಮೇಳವನ್ನು ಸ್ಥಾಪಿಸಿ, ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಾ,ಸುಮಾರು 44 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದರು.

Leave A Reply

Your email address will not be published.