Puttur: ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಇದರ ಮಹಾಸಭೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಾರಾನಾಥ ಸವಣೂರು ಇವರಿಗೆ *ಗೌರವ ಸನ್ಮಾನ*

Puttur: ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಇದರ ಮಹಾಸಭೆಯಲ್ಲಿ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರಿಗೆ ಗೌರವ ಸನ್ಮಾನವು ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಾದ ರಮೇಶ್ ರಾಯಿ ಶಾಲು ಹೊದಿಸಿ ಫಲ ಕಾಣಿಕೆಯಿತ್ತು ಸನ್ಮಾನಿಸಿದರು, ದ.ಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಅಧ್ಯಾಪಕರ ಸಹಕಾರಿ ಸಂಘದ ನಿರ್ದೇಶಕರು,ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
Comments are closed.