Puttur : ಪುತ್ತೂರಿನಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

Share the Article

Putturu : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ನಡೆದಿದೆ.

ಪುತ್ತೂರು(Putturu) ತಾಲ್ಲೂಕಿನ ಕೊಡಿಮರ ನಿವಾಸಿ ಬೇಬಿ ಪುಜಾರಿ ಮತ್ತು ಕುಸುಮಾ ದಂಪತಿ ಪುತ್ರ ರಕ್ಷಿತ್ ಕೊಡಿಮರ ಆತ್ಮಹತ್ಯೆಗೆ ಶರಣಾದವರು. ಕೂಲಿ‌ಕಾರ್ಮಿಕರಾಗಿದ್ದ ಅವರು ಮನೆಯ ಸಮೀಪ ನೇಣು ಬಿಗಿದು ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆಎಂ ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತಂದರು ಅದಾಗಲೇ ರಕ್ಷಿತ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಇನ್ನು ರಕ್ಷಿತ್(Rakshith) ಅವರು ಏಕೆ ಹೀಗೆ ಮಾಡಿಕೊಂಡರು, ಆತ್ಮಹತ್ಯೆ ಮಾಡಿಕೊಳ್ಳುವಂತದ್ದು ಏನಾಗಿತ್ತು ಎಂಬುದು ತಿಳಿದು ಬಂದಿಲ್ಲ. ಅತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply

Your email address will not be published.