Health: ಆರೋಗ್ಯ ವಿಚಾರವಾಗಿ ಸಂಸ್ಕೃತ ಶ್ಲೋಕಗಳು ಏನು ಹೇಳುತ್ತವೆ? ಪ್ರಾಚೀನ ಭಾರತೀಯ ಆರೋಗ್ಯ ಸಲಹೆಗಳನ್ನು ಅನುಸರಿಸಿ ನೋಡಿ

1. ಅಜೀರ್ಣೇ ಭೋಜನಂ ವಿಷಮ್ ।
ಈ ಹಿಂದೆ ಸೇವಿಸಿದ ಮಧ್ಯಾಹ್ನದ ಊಟ ಜೀರ್ಣವಾಗದಿದ್ದರೆ ರಾತ್ರಿಯ ಊಟವನ್ನು ಸೇವಿಸುವುದು ವಿಷ ಸೇವಿಸುವುದಕ್ಕೆ ಸಮಾನವಾಗಿರುತ್ತದೆ. ಹಿಂದಿನ ಆಹಾರವು ಜೀರ್ಣವಾಗುತ್ತದೆ ಎಂಬುದಕ್ಕೆ ಹಸಿವು ಒಂದು ಸಂಕೇತವಾಗಿದೆ

2. ಅರ್ಧರೋಗಹರಿ ನಿದ್ರಾ।
ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.

3 ಮುದ್ಗಾಲಿ ಗದವ್ಯಾಲಿ.
ಎಲ್ಲಾ ಬೇಳೆಕಾಳುಗಳಲ್ಲಿ, ಹೆಸಿರುಕಾಳು ಉತ್ತಮವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಿಸಲು ಸುಲಭ.

4. ಭಗ್ನಾಸ್ಥಿ-ಸಂಧಾನಕರೋ ಲಶುನಃ.
ಬೆಳ್ಳುಳ್ಳಿ ಮುರಿದ ಮೂಳೆಗಳನ್ನೂ ಜೋಡಿಸುತ್ತದೆ.

5. ಅತಿ ಸರ್ವತ್ರ ವರ್ಜಯೇತ್.
ರುಚಿ ಎಂಬ ಕಾರಣಕ್ಕೆ ಯಾವುದನ್ನೂ ಅತಿಯಾಗಿ ಸೇವಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಿ.

6. ನಾಸ್ತಿ ಮೂಲಮನೌಷಧಮ್ ।
ದೇಹಕ್ಕೆ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ.

7. ನ ವೈದ್ಯಃ ಪ್ರಭುರಾಯುಷಃ ।
ಯಾವುದೇ ವೈದ್ಯ ದೀರ್ಘಾಯುಷ್ಯ ನೀಡಲು ಸಾಧ್ಯವಿಲ್ಲ. (ವೈದ್ಯರಿಗೆ ಮಿತಿಗಳಿವೆ.)

8. ಚಿಂತಾ ವ್ಯಾಧಿ ಪ್ರಕಾಶಾಯ ।
ಚಿಂತೆಯು ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ.

9. ವ್ಯಾಯಾಮಶ್ಚ ಶನೈಃ ಶನೈಃ ।
ಯಾವುದೇ ವ್ಯಾಯಾಮವನ್ನು ನಿಧಾನವಾಗಿ ಮಾಡಿ. (ವೇಗದ ವ್ಯಾಯಾಮ ಒಳ್ಳೆಯದಲ್ಲ.)

10. ಅಜವತ್ ಚರ್ವಣಂ ಕುರ್ಯಾತ್ । ಮೇಕೆಯಂತೆ ನಿಮ್ಮ ಆಹಾರವನ್ನು ಅಗಿಯಿರಿ. (ಆಹಾರವನ್ನು ಅವಸರದಲ್ಲಿ ನುಂಗಬೇಡಿ. ಲಾಲಾರಸವು ಜೀರ್ಣಕ್ರಿಯೆಯಲ್ಲಿ ಮೊದಲು ಸಹಾಯ ಮಾಡುತ್ತದೆ.)

11. ಸ್ನಾನಂ ನಾಮ ಮನಃಪ್ರಸಾದನಕರಂದುಃ ಸ್ವಪ್ನ-ವಿಧ್ವಂಸನಮ್ ।
ಸ್ನಾನವು ಖಿನ್ನತೆಯನ್ನು ನಿವಾರಿಸುತ್ತದೆ. ಇದು ಕೆಟ್ಟ ಕನಸುಗಳನ್ನು ಓಡಿಸುತ್ತದೆ.

12. ನ ಸ್ನಾನಮಾಚರೆದ್ ಭುಕ್ತ್ವಾ ।
ಆಹಾರ ತೆಗೆದುಕೊಂಡ ತಕ್ಷಣ ಸ್ನಾನ ಮಾಾಬೇಡಿ. (ಜೀರ್ಣಕ್ರಿಯೆಯು ಪರಿಣಾಮ ಬೀರುತ್ತದೆ).

13. ನಾಸ್ತಿ ಮೇಘಸಮಂ ತೊಯಮ್ । ಶುದ್ಧತೆಯಲ್ಲಿ ಯಾವುದೇ ನೀರು ಮಳೆನೀರಿನಷ್ಟು ಉತ್ತಮವಲ್ಲ.

14. ಅಜೀರ್ಣೇ ಭೇಷಜಂ ವಾರಿ ।
ಅಜೀರ್ಣವಾದಾಗ ನೀರು ಕುಡಿಯುವುದು ಔಷಧಿಯಂತೆ ಕೆಲಸ ಮಾಡುತ್ತದೆ.

15. ಸರ್ವತ್ರ ನೂತನಂ ಷಸ್ತಂ, ಸೇವಕಾನ್ನೇ ಪುರಾತನೇ ।
ಯಾವಾಗಲೂ ತಾಜಾ ಪದಾರ್ಥಗಳಿಗೆ ಆದ್ಯತೆ ನೀಡಿ. ಆದರೆ ಅನ್ನ(ಧಾನ್ಯಗಳು) ಮತ್ತು ಸೇವಕ ಹಳೆಯದಾದಾಗ ಉತ್ತಮ.

16. ನಿತ್ಯಂ ಸರ್ವ ರಸ ಭಕ್ಷ್ಯಃ ।।
ಪ್ರತಿದಿನ ಎಲ್ಲಾ ಆರು ರುಚಿಗಳನ್ನು ಹೊಂದಿರುವ ಆಹಾರವನ್ನು ತೆಗೆದುಕೊಳ್ಳಿ. (ಅಂದರೆ: ಉಪ್ಪು, ಸಿಹಿ, ಕಹಿ, ಹುಳಿ, ಸಂಕೋಚಕ/ಒಗರು ಮತ್ತು ಕಟು/ಖಾರ).

17. ಜಠರಂ ಪೂರಾಯೇದರ್ಧಮ್ ಅನ್ನೈರ್, ಭಾಗಂ ಜಲೇನ್ ಚ ।
ವಾಯೋಃ ಸಂಚಾರಾರ್ಥಾಯ ಚತರ್ಥಮವಶೇಷಯೇತ್ ।।
ನಿಮ್ಮ ಜಠರದ ಅರ್ಧವನ್ನು ಘನವಸ್ತುಗಳಿಂದ ತುಂಬಿಸಿ, ಕಾಲು ಭಾಗ ನೀರು ಮತ್ತು ಉಳಿದ ಕಾಲು ಭಾಗವನ್ನು (ಗಾಳಿಯಾಡಲು) ಖಾಲಿ ಬಿಡಿ.

18. ಭುಕ್ತ್ವಾ ಶತಪಥಂ ಗಚ್ಛೇದ್ ಯದಿಚ್ಛೇತ್ ಚಿರಜೀವಿತಮ್ ।
ಆಹಾರವನ್ನು ತೆಗೆದುಕೊಂಡ ನಂತರ ಎಂದಿಗೂ ಸುಮ್ಮನೆ ಕುಳಿತುಕೊಳ್ಳಬೇಡಿ. ಕನಿಷ್ಠ ನೂರು ಹೆಜ್ಜೆ ನಡೆಯಿರಿ. ಈ ಅಭ್ಯಾಸ ದೀರ್ಘಾಯುಷ್ಯವನ್ನು ನೀಡುತ್ತದೆ.

19. ಕ್ಷುತ್ಸಾಧುತಾಂ ಜನಯತಿ ।
ಹಸಿವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಸಿವಾದಾಗ ಮಾತ್ರ ತಿನ್ನಿರಿ.

20. ಚಿಂತಾ ಜರಾ ನಾಮ ಮನುಷ್ಯಾಣಾಮ್ | ಚಿಂತೆಯು ಮನುಷ್ಯ ನಮ್ಮಪ್ಪನ್ನು ತೀವ್ರಗೊಳಿಸುತ್ತದೆ.

21. ಶತಂ ವಿಹಾಯ ಭೋಕ್ತವ್ಯಂ, ಸಹಸ್ರಂ ಸ್ನಾನಮಾಚರೇತ್ । ಆಹಾರದ ಸಮಯ ಬಂದಾಗ, 100 ಕೆಲಸಗಳನ್ನು ಪಕ್ಕಕ್ಕೆ ಇರಿಸಿ, ಸ್ನಾನದ ಸಮಯದಲ್ಲಿ ಸಾವಿರ ಕೆಲಸ ಪಕ್ಕಕ್ಕಿಡಿ. (ಅಂದರೆ, ಊಟ ಮತ್ತು ಸ್ನಾನವನ್ನು ಸಮಯಕ್ಕೆ ಸರಿಯಾಗಿ ತಪ್ಪದೇ ಮಾಡಿ).

22. ಸರ್ವಧರ್ಮೇಷು ಮಧ್ಯಮಾಮ್ | ಯಾವಾಗಲೂ ಮಧ್ಯಮ ಮಾರ್ಗವನ್ನು ಆರಿಸಿ. ಯಾವುದರಲ್ಲೂ ಅತಿರೇಕಕ್ಕೆ ಹೋಗುವುದನ್ನು ತಪ್ಪಿಸಿ.

• ಡಾ. ಪ್ರ. ಅ. ಕುಲಕರ್ಣಿ

Leave A Reply

Your email address will not be published.