Rahul Gandhi: ತಿರುಪತಿ ಲಡ್ಡು ವಿವಾದ- ರಾಹುಲ್ ಗಾಂಧಿ ಹೇಳಿದ್ದಿಷ್ಟು !!
Rahul Gandhi: ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ವಿವಾದದ ಪ್ರಕರಣ ದೇಶಾದ್ಯಂತ ಕಿಚ್ಚು ಹಬ್ಬಿಸಿದೆ. ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದೀಗ ಈ ಪ್ರಕರಣದ ಕುರಿತು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ(Rahul Gandhi) ಪ್ರತಿಕ್ರಿಯಿಸಿದ್ದು ಇದು ಗೊಂದಲಕಾರಿಯಾಗಿದೆ ಎಂದು ಹೇಳಿದ್ದಾರೆ.
ಹೌದು, ಈ ಲಾಡು ವಿವಾದದ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಅವರು “ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವನ್ನು ಅಪವಿತ್ರಗೊಳಿಸಲಾಗಿದೆ ಎಂಬ ವರದಿಗಳು ಆತಂಕಕಾರಿಯಾಗಿವೆ. ಭಗವಾನ್ ಬಾಲಾಜಿ ಭಾರತ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರಿಗೆ ಪೂಜ್ಯ ದೇವರು. ಈ ವಿಷಯವು ಪ್ರತಿಯೊಬ್ಬ ಭಕ್ತರಿಗೂ ನೋವುಂಟು ಮಾಡುತ್ತದೆ ಮತ್ತು ಅದನ್ನು ಕೂಲಂಕಷವಾಗಿ ತನಿಖೆ ಮಾಡಬೇಕಾಗಿದೆ. ಭಾರತದಾದ್ಯಂತದ ಇರುವ ನಮ್ಮ ಧಾರ್ಮಿಕ ಸ್ಥಳಗಳ ಪಾವಿತ್ರ್ಯ ರಕ್ಷಿಸಬೇಕಾಗಿದೆ” ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು ‘ತಿರುಪತಿ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಹೇಳಿಕೆಗಳು ಸರಿಯಾಗಿದ್ದರೆ, ಪೂರ್ಣ ಪ್ರಮಾಣದ ತನಿಖೆಯು ತಪ್ಪಿತಸ್ಥರನ್ನು ಗುರುತಿಸಬೇಕು, ಆದರೆ ಅವರು ತಪ್ಪಾಗಿದ್ದರೆ ಅಥವಾ ಪ್ರೇರಿತರಾಗಿದ್ದರೆ, ಲಕ್ಷಾಂತರ ತಿರುಪತಿ ಭಕ್ತರು ತಮ್ಮ ನಂಬಿಕೆಯೊಂದಿಗೆ ಆಟವಾಡುವವರನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿದೆ.
The reports about the defilement of the Prasad at Sri Venkateshwara temple in Tirupati are disturbing.
Lord Balaji is a revered deity for millions of devotees in India and across the world. This issue will hurt every devotee and needs to be thoroughly looked into.
Authorities…
— Rahul Gandhi (@RahulGandhi) September 20, 2024