Dakshina Kannada: ಹಿಂದೂ ಸಂಘಟನೆ ಮುಖಂಡನ ಕುತ್ತಿಗೆಗೆ ಚಾಕು ಇರಿತ : ಸ್ನೇಹಿತನಿಂದಲೇ ದುಷ್ಕೃತ್ಯ : ಜೀವನ್ಮರಣ ಹೋರಾಟದಲ್ಲಿ ಹಿಂದೂ ಮುಖಂಡ

Dakshina Kannada: ಹಿಂದೂ ಸಂಘಟನೆಯ ಮುಖಂಡನಿಗೆ ಸ್ವತಃ ಸ್ನೇಹಿತನೆ ಕುತ್ತಿಗೆಗೆ ಚಾಕು ಇರಿದಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಆದರೆ ಇದುವರೆಗೂ ಚಾಕು ಇರಿತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: Rahul Gandhi: ಕಾಂಗ್ರೆಸ್’ಗೆ ರಾಹುಲ್ ಗಾಂಧಿ ರಾಜೀನಾಮೆ? ವೈರಲ್ ವಿಡಿಯೋ ಅಸಲತ್ತೇನು ?

ಹಲ್ಲೆಗೊಳಗಾದ ವ್ಯಕ್ತಿಯನ್ನು ಹಿಂದೂ ಸಂಘಟನೆಯ ಮುಖಂಡ ಹಾಗೂ ಉದ್ಯಮಿಯು ಆಗಿರುವ ಪುಷ್ಪರಾಜ್ ಎಂದು ತಿಳಿದು ಬಂದಿದೆ. ಸ್ನೇಹಿತರಿಬ್ಬರು ಜೊತೆಯಾಗಿ ಆಟೋದಲ್ಲಿ ತೆರಳುತ್ತಿದ್ದ ವೇಳೆ ಸ್ನೇಹಿತ ರವಿ ಎಂಬಾತ ಚೂರಿಯಿಂದ ಕುತ್ತಿಗೆಗೆ ಇರಿದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Jain Couple: ಸನ್ಯಾಸತ್ವ ದೀಕ್ಷೆ ಪಡೆಯಲು ಬರೋಬ್ಬರಿ 200 ಕೋಟಿ ರು. ದಾನ ಮಾಡಿದ ಜೈನ ದಂಪತಿಗಳು

ಸದ್ಯ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave A Reply

Your email address will not be published.