Parliament Election: ಲಿಂಗಾಯತ ಹಾಗೂ ಒಕ್ಕಲಿಗ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯಲ್ಲಿ ಸಿಂಹ ಪಾಲು

Parliament Election: ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಒಂಬತ್ತು ಲಿಂಗಾಯತರು, ನಾಲ್ಕು ವೊಕ್ಕಲಿಗರು, ಮೂರು ಬ್ರಾಹ್ಮಣರು ಮತ್ತು ಒಬಿಸಿ ಅಭ್ಯರ್ಥಿಗಳನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿದೆ. ಅದು ಸ್ಪರ್ಧಿಸುತ್ತಿರುವ ನಾಲ್ಕು ಎಸ್‌ಸಿ ಮೀಸಲು ಸ್ಥಾನಗಳ ಪೈಕಿ ಒಬ್ಬ ಬಂಜಾರ, ಎರಡು ಮಾದಿಗ ಮತ್ತು ಒಬ್ಬ ಛಲವಾದಿ ನಾಯಕರನ್ನು ಕಣಕ್ಕಿಳಿಸಿದೆ. ಅದರ ಪಾಲುದಾರ ಪಕ್ಷವಾದ ಜೆಡಿಎಸ್‌ ಎರಡು ಒಕ್ಕಲಿಗರ ಮತ್ತು ಒಬ್ಬ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.

ಇದನ್ನೂ ಓದಿ: Hassan : 60 ಗೋವುಗಳ ಕೊಂದು, ರಕ್ತವನ್ನು ಕೆರೆಗೆ ಹರಿಸಿದ ಪಾಪಿಗಳು – 10 ಸಾವಿರ ಕೆಜಿ ಗೋ ಮಾಂಸ ಪೋಲಿಸ್ ವಶಕ್ಕೆ !!

ಇನ್ನು ಕಾಂಗ್ರೆಸ್ ಪಕ್ಷ ಏಳು ಒಕ್ಕಲಿಗರು, ಐದು ಲಿಂಗಾಯತರು ಮತ್ತು ಆರು ಒಬಿಸಿಗಳನ್ನು ಕಣಕ್ಕಿಳಿಸಿದೆ. ಐದು ಎಸ್‌ಸಿ ಮೀಸಲು ಸ್ಥಾನಗಳಲ್ಲಿ ಹೆಚ್ಚಿನವು ದಲಿತರ ಛಲವಾದಿ ಪಂಗಡಕ್ಕೆ ಹೋಗಿವೆ. ಪಕ್ಷವು ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್‌ ಟಿಕೆಟ್ ನೀಡಿದ ಆರು ಒಬಿಸಿಗಳ ಪೈಕಿ ಇಬ್ಬರು ಕುರುಬ ಅಭ್ಯರ್ಥಿಗಳಿದ್ದಾರೆ. ಆದರೆ ಬಿಜೆಪಿ ಈ ಸಮುದಾಯದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಇದನ್ನೂ ಓದಿ: Bank Holiday in April 2024: ಏಪ್ರಿಲ್‌ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ

ಮೈಸೂರು ರಾಜಮನೆತನದ ವಂಶಸ್ಥ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ (ಬಿಲ್ಲವ/ಈಡಿಗ ಸಮುದಾಯ) ಬಿಜೆಪಿಯಿಂದ ಟಿಕೆಟ್ ಪಡೆಯುವ ಒಬಿಸಿ ಅಭ್ಯರ್ಥಿಗಳಾಗಿದ್ದಾರೆ.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ತೇಜಸ್ವಿ ಸೂರ್ಯ ಬ್ರಾಹ್ಮಣರಾಗಿದ್ದರೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಸಿ.ಎನ್‌.ಮಂಜುನಾಥ್ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿಗಳಾಗಿದ್ದಾರೆ.

ಕಾಂಗ್ರೆಸ್‌ನ ಪ್ರಮುಖ ಮತದಾರರಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಭಾಗವನ್ನು ಹೊಂದಿದ್ದರೂ, ಸಮುದಾಯಕ್ಕೆ ಪಕ್ಷದ ಟಿಕೆಟ್‌ಗಳ ಸಂಖ್ಯೆ ಈ ಬಾರಿ ಕೇವಲ ಒಂದಕ್ಕೆ ಕುಸಿದಿದೆ. ಆದರೆ ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಗೆ ರಾಜ್ಯದಿಂದ ಯಾವುದೇ ಕ್ರೈಸ್ತ ಅಭ್ಯರ್ಥಿಯ ಹೆಸರನ್ನು ಸೂಚಿಸಿಲ್ಲ.

Leave A Reply

Your email address will not be published.