Karnataka High Court: ಪ್ರತಿ ಅಪಘಾತ ಪ್ರಕರಣದಲ್ಲೂ ಪ್ರತ್ಯಕ್ಷ ಸಾಕ್ಷಿ ನಿರೀಕ್ಷಿಸುವುದು ಅವಾಸ್ತವಿಕ : ಕರ್ನಾಟಕ ಹೈಕೋರ್ಟ್

ಪ್ರತಿ ಅಪಘಾತ ಪ್ರಕರಣದಲ್ಲೂ ಪ್ರತ್ಯಕ್ಷದರ್ಶಿಯನ್ನು ನಿರೀಕ್ಷಿಸುವುದು ವಾಸ್ತವಿಕವಲ್ಲ ಎಂದು ಕರ್ನಾಟಕ ಹೈಕೋರ್ಟ್ ನ ಧಾರವಾಡ ಪೀಠವು ಅಭಿಪ್ರಾಯಪಟ್ಟಿದೆ. ಪ್ರತ್ಯಕ್ಷದರ್ಶಿಗಳ ಅನುಪಸ್ಥಿತಿಯ ಆಧಾರದ ಮೇಲೆ ಪರಿಹಾರವನ್ನು ಪ್ರಶ್ನಿಸಿ ವಿಮಾ ಕಂಪನಿಗಳು ಅರ್ಜಿಯನ್ನು ಅನೇಕ ಬಾರಿ ವಜಾಗೊಳಿಸಿವೆ ಎಂದು ತಿಳಿಸಿದೆ.

ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಕಾಣೆಯಾಗಿದ್ದ 70 ವರ್ಷದ ವೃದ್ಧೆಯ ಶವ ಪತ್ತೆ : ಕೈ, ಕಾಲು ಕತ್ತರಿಸಿ ಬೇರೆಡೆಗೆ ಎಸೆದಿರುವ ದುಷ್ಕರ್ಮಿಗಳು

ಸಾಕ್ಷಿ ಹೇಳುವವರ ಆಸಕ್ತಿಯ ಕೊರತೆಯಿಂದಾಗಿ ಅಥವಾ ಪೊಲೀಸರ ತಪ್ಪು ಗ್ರಹಿಕೆಗಳಿಂದಾಗಿ ಕಾನೂನು ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಕ್ಷಿಗಳು ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ವಿವರಿಸಿದರು.

ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಪ್ರತ್ಯಕ್ಷದರ್ಶಿಗಳ ವಿವರಗಳನ್ನು ಅವಲಂಬಿಸುವುದು ಪ್ರಾಯೋಗಿಕವಾಗಿಲ್ಲದಿರಬಹುದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಪಾನ್ ಮಳಿಗೆಗಳನ್ನು ನಡೆಸುತ್ತಿರುವ ಯೂನುಸ್ ಮತ್ತು ಶಬ್ಬೀರ್ ಅಹ್ಮದ್, 2013ರ ಆಗಸ್ಟ್ 27ರಂದು ಹುಬ್ಬಳ್ಳಿ ತಾಲ್ಲೂಕಿನ ಮಿಶ್ರೀಕೋಟಿ ಕದಂಕೋಪ್ಪ ಬಳಿ ಕಾರ್ವಾರ್-ಹುಬ್ಬಳ್ಳಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಲಗೇಜ್ ವಾಹನವೊಂದು ತಮಗೆ ಡಿಕ್ಕಿ ಹೊಡೆದಿದೆ ಎಂಬ ಆಧಾರದ ಮೇಲೆ ಪರಿಹಾರ ಕೋರಿದ್ದರು.

2017ರ ಆಗಸ್ಟ್ 30ರಂದು ಹುಬ್ಬಳ್ಳಿಯ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಯು ಅವರಿಗೆ ಕ್ರಮವಾಗಿ 77,350 ಮತ್ತು ಸುಮಾರು 1.20 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿತ್ತು .

ವಾಹನ ವಿಮೆದಾರರಾದ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಈ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಅಪಘಾತ ಕೃತ್ಯವೆಸಗಿದ ವಾಹನದ ಕುರಿತ ಪೊಲೀಸ್ ದಾಖಲೆಗಳನ್ನು ನ್ಯಾಯಮಂಡಳಿ ಗಣನೆಗೆ ತೆಗೆದುಕೊಂಡಿದೆ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು. ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಕ್ಕಾಗಿ ಚಾಲಕ ಸುರೇಶ್ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಜನನಿಬಿಡ ಅಥವಾ ನಗರ ಪ್ರದೇಶಗಳಲ್ಲಿ ಸಂಭವಿಸುವ ಅಪಘಾತಗಳ ಕುರಿತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯುವುದು ಸುಲಭ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯಕ್ಷ ಸಾಕ್ಷಿ ಸಿಗುವುದು ಕಡಿಮೆ. ಅಪಘಾತ ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿ ದೊರೆಯದ ಕಾರಣಗಳಿಗಾಗಿ ಅನೇಕ ಸವಾಲುಗಳನ್ನು ಎದುರಿಸ ಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

Leave A Reply

Your email address will not be published.