Puttur: ಜಾಗದ ವಿಚಾರವಾಗಿ ಹಲ್ಲೆ ಪ್ರಕರಣ; ಇತ್ತಂಡಗಳಿಂದ ದೂರು ದಾಖಲು
![](https://hosakannada.com/wp-content/uploads/2024/02/crime-2.jpg)
Puttur: ಜಾಗದ ವಿಚಾರವಾಗಿ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತಂಡಗಳು ದೂರು ನೀಡಿದ್ದು, (puttur)ಪ್ರಕರಣ ದಾಖಲಾಗಿದೆ.
![](https://hosakannada.com/wp-content/uploads/2024/07/First.jpeg)
ಕೆದಿಲ ನಿವಾಸಿ ಸವಿತಾ ಭಟ್ ಅವರು ನೀಡಿರುವ ದೂರಿನ ಮೇಲೆ ಹೈದರಾಲಿ, ಹಬೀಬ್ ಮೊಹ್ಸಿನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಹಲ್ಲೆಗೊಂಡ ಮಹಿಳೆ ಸವಿತಾ ಭಟ್ ಅವರ ಪತಿಯ ಒಡೆತನದಲ್ಲಿರುವ ಜಮೀನಿನ ಪಕ್ಕದಲ್ಲಿ ಹೈದರಾಲಿ ಎಂಬಾತನಿಗೆ ಸೇರಿದ ಜಾವಿದೆ. ಸದ್ರಿ ಜಮೀನುಗಳ ಗಡಿಗೆ ಸಂಬಂಧಿಸಿದ ತಕರಾರು ಇದೆ.
ಫೆ.11 ರ ಸಂಜೆ ಸಮಯ ಸದ್ರಿ ಗಡಿ ತಕರಾರು ಇರುವ ಜಾಗದಲ್ಲಿ ಹೈದರಾಲಿ, ಹಬೀಬ್ ಮೊಹ್ಸಿನ್ ಹಾಗೂ ಇತರ ಹದಿನೈದು ಮಂದಿ ಬೇಲಿ ಹಾಕಲು ಬಂದಾಗ ಮಹಿಳೆಯ ಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಹಬೀಬ್ ಮೊಹ್ಸಿನ್ ಅವಾಚ್ಯ ಶಬ್ದಗಳ ನಿಂದನೆ ಮಾಡುತ್ತ, ಕಬ್ಬಿಣದ ಸುತ್ತಿಗೆಯಿಂದ ಹಲ್ಲೆ ಮಾಡಿದ್ದು, ನಂತರ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದು ತಂಡ ನೀಡಿದ ದೂರು ಈ ರೀತಿ ಇದೆ;
ಹೈದರಾಲಿ ಅವರ ಪತ್ನಿ ದೂರು ನೀಡಿದ್ದು, ಸವಿತಾ ಭಟನ ಹಾಗೂ ಶಿವರಾಮ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯ ಪತಿ ಜಮೀನಿಗೆ ಬೇಲಿ ಹಾಕುವಾಗ ಸವಿತಾಭಟ್ ಹಾಗೂ ಶಿವರಾಮ ಭಟ್ ಅವರು ತಕರಾರು ತೆಗೆದು ಬೇಲಿಯನ್ನು ಕಿತ್ತು ಬಿಸಾಕಿರುತ್ತಾರೆ. ಈ ಸಂದರ್ಭ ಬೇಲಿಯ ಕಂಬ ಅಲ್ಲಿ ಕೆಲಸ ಮಾಡುತ್ತಿದ್ದ ಆಲಿ ಎಂಬುವರಿಗೆ ತಾಗಿ ಗಾಯವಾಗಿರುತ್ತದೆ. ಅನಂತರ ಅವಾಚ್ಯ ನಿಂದನೆ ನಡೆದಿದ್ದು, ಜೀವ ಬೆದರಿಕೆ ಹಾಕಿರುವ ಕುರಿತು ವರದಿಯಾಗಿದೆ.
ಎರಡೂ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.