Ram Mandir: ರಾಮಮಂದಿರ ಉದ್ಘಾಟನೆ ಬಳಿಕ ದೇಶಾದ್ಯಂತ ವಿವಿಧ ಶ್ರೀರಾಮ ಮಂದಿರದಲ್ಲಿ ಹನುಮ ಪ್ರತ್ಯಕ್ಷ

Ayodhya: ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ಉದ್ಘಾಟನೆಯಾದ ಮರು ದಿನ ಕಪಿಯೊಂದು ಗರ್ಭಗುಡಿಗೆ ಪ್ರವೇಶ ಮಾಡಿ ಭಕ್ತರಲ್ಲಿ ಕುತೂಹಲ ಮೂಡಿಸಿತ್ತು. ಇದಾದ ನಂತರ ಹಲವು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದ್ದು, ಅದೇನೆಂದರೆ ಎಲ್ಲಿ ರಾಮ ಇರುವನೋ ಅಲ್ಲಿ ಹನುಮನಿರುವ ಎಂಬ ನಂಬಿಕೆಯೊಂದಿದೆ.

ಇದನ್ನೂ ಓದಿ: EPFO: ನಿಮ್ಮ ಪಿಎಫ್ ಹಣಕ್ಕೆ ಹೆಚ್ಚು ಬಡ್ಡಿ ಪಡೆಯುವುದು ಹೇಗೆ!!

ಇದೀಗ ಇದಕ್ಕೆ ಪೂರಕವಾಗಿ ಶ್ರೀರಾಮ ಮಂದಿರವನ್ನು ಕೋತಿಗಳು ಪ್ರವೇಶ ಮಾಡಿರುವ ವೀಡಿಯೋಗಳು ಬಹಿರಂಗಗೊಳ್ಳುತ್ತಿದ್ದು, ಮಹಾರಾಷ್ಟ್ರದ ಲೋನಾವಾಲದಲ್ಲಿ ಕಪಿಯೊಂದು ಗುಡಿ ಪ್ರವೇಶ ಮಾಡಿ ಮೂರ್ತಿಗಳಿದ್ದ ಪೀಠವನ್ನೇ ಏರಿ ಕುಳಿತಿರುವ ಘಟನೆ ನಡೆದಿದೆ.

 

ಹಾಗೆನೇ ಕರ್ನಾಟಕದಲ್ಲೂ ಕೋತಿಯೊಂದು ದೇಗುಲಚ ದೀಪದ ಬತ್ತಿಯನ್ನು ಸರಿಮಾಡಿರುವಂತಹ ಘಟನೆ ಕೂಡಾ ನಡೆದಿದೆ.

 

ಇದೆಲ್ಲವೂ ಅಯೋಧ್ಯೆಗೆ ರಾಮ ಬಂದ ನಂತರ ನಡೆದಿದೆ ಎನ್ನಲಾಗಿದೆ. ಎಲ್ಲಿ ರಾಮ ರಾಮ ಎಂಬ ಭಕ್ತರ ಹರ್ಷೋದ್ಗಾರ ಮೊಳಗುತ್ತೋ ಅಲ್ಲಿ ಹನುಮ ಬರುವುದು ಸಹಜ ಎನ್ನಲಾಗಿದೆ.

Leave A Reply

Your email address will not be published.