Hanuma Flag: ಮಂಡ್ಯವನ್ನು ಮಂಗಳೂರು ಮಾಡೋಕೆ ಬಿಡಲ್ಲ ಎಂದ ಶಾಸಕ!
![Hanuma Flag](https://hosakannada.com/wp-content/uploads/2024/02/IMG-20240204-WA0009.jpg)
MLA Ravikumar Ganiga: ಶಾಸಕ ರವಿಕುಮಾರ್ ಗಣಿಗ ಅವರು ಹೊರಗಿನಿಂದ ಬಂದು ವಿಷ ಹಾಕಿದ್ದು, ಕೈಮುಗಿದು ಬೇಡಿಕೊಳ್ತೀನಿ ಶಾಂತವಾಗಿರಿ. ಸುಮ್ಮನೆ ಊರಿಗೆ ಬೆಂಕಿ ಹಚ್ಚಲಾಗಿದೆ. 7,9 ರಂದು ದಯವಿಟ್ಟು ನಮ್ಮೂರು ಬಂದ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
![](https://hosakannada.com/wp-content/uploads/2024/07/First.jpeg)
ಕೆರಗೋಡಿನ ಹಲ್ಲೆಗೆರೆ ಬಳಿ ಬರಾಕ್ ಒಬಾಮಾ, ದಲೈಲಾಮ ಬರೋರಿದ್ದಾರೆ. ಈ ಸಮಯದಲ್ಲಿ ಈ ರೀತಿ ಬಂದ್ ಮಾಡಿ ಅಡ್ಡಿಯುಂಟು ಮಾಡಬೇಡಿ, ಶಾಂತಿಯಿಂದ ಇರಿ. ಇದೇ ವೇಳೆ ಮಂಡ್ಯವನ್ನು ಮಂಗಳೂರು ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಹನುಮ, ರಾಮ ಇಬ್ಬರು ನಮ್ಮವರೇ. ಅವರನ್ನು ನಾನು ಪೂಜಿಸುತ್ತೇನೆ. ಹನುಮಧ್ವಜವನ್ನು ನಮ್ಮನೆಗೂ ತಂದುಕೊಡಿ, ನಾನು ಹನುಮನ ಭಕ್ತ ಎಂದು ಹೇಳಿದರು. ಚುನಾವಣೆ ಸಮೀಪ ಬರುತ್ತಿರುವುದರಿಂದ ನಮ್ಮನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.