Hiremagalur Kannan: ಕನ್ನಡದ ಪೂಜಾರಿ ಕಣ್ಣನ್‌ಗೆ ನೀಡಿದ ನೋಟಿಸ್‌ ವಾಪಸ್‌ ಪಡೆದ ಸರಕಾರ!! ಯೂಟರ್ನ್‌ ಹೊಡೆಯಲು ಇಲ್ಲಿದೆ ಮಹತ್ವದ ಕಾರಣ!!!

Hiremagalur Kannan: ಹಿರೇಮಗಳೂರು ಗ್ರಾಮದಲ್ಲಿರುವ ಕೊಂದಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾದ ಕನ್ನಡದ ಪೂಜಾರಿ ಹಿರೇಮಗಳೂರು (Hiremagalur Kannan) ಅವರಿಗೆ ನೀಡಿದ್ದ ನೋಟಿಸ್‌ ಅನ್ನು ಸರಕಾರ ವಾಪಸ್‌ ಪಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದು ತಹಶೀಲ್ದಾರ್‌ರಿಂದ ಆದ ಯಡವಟ್ಟು. ನನಗೂ ಈ ಮಾಹಿತಿ ಇರಲಿಲ್ಲ. ಕಣ್ಣನ್‌ ಅವರದ್ದೇನೂ ತಪ್ಪಿಲ್ಲ. ತಹಶೀಲ್ದಾರ್‌ ದುಡ್ಡು ಕೊಟ್ಟಿದ್ದಕ್ಕೆ ಅವರು ತಗೊಂಡಿದ್ದಾರೆ. ಕೂಡಲೇ ಹಿರೇಮಗಳೂರು ಕಣ್ಣನ್‌ ಅವರಿಗೆ ನೀಡಿದ್ದ ನೋಟಿಸ್‌ ಅನ್ನು ಹಿಂಪಡೆಯಲು ಸೂಚನೆ ನೀಡುತ್ತೇನೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.

Leave A Reply

Your email address will not be published.