Belthangady: ಮಗನ ಆತ್ಮಹತ್ಯೆ ಬೆನ್ನಲ್ಲೇ ತಂದೆ ಕೂಡಾ ಆತ್ಮಹತ್ಯೆ!!!

Belthangady: ಮಗ ಆತ್ಮಹತ್ಯೆ ಮಾಡಿಕೊಂಡ 13 ನೇ ದಿನಕ್ಕೆ ತಂದೆ ಕೂಡಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಉಜಿರೆಯ ಪೆರ್ಲದಲ್ಲಿ ನಡೆದಿದೆ.

ಯೋಗೀಶ್‌ ಪೂಜಾರಿ ಮಗ ಯಕ್ಷಿತ್‌ (14) ಜ.4 ರಂದು ಕ್ಷುಲ್ಲಕ ಕಾರಣಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಜ.14ರಂದು ಯಕ್ಷಿತ್‌ ಉತ್ತರಕ್ರಿಯೆ ನಡೆದಿದ್ದು, ಇದರ ಬೆನ್ನಲ್ಲೇ ಜ.16 ರಂದು (ಇಂದು) ಮನೆಯಲ್ಲಿ ತಂದೆ ಯೋಗೀಶ್‌ ಪೂಜಾರಿ (41) ಮಗ ಯಕ್ಷಿತ್‌ ಆತ್ಮಹತ್ಯೆ ಮಾಡಿದ ರೀತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರು ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Free LPG Cylinder: ಗೃಹಿಣಿಯರೇ ಗಮನಿಸಿ, ಕೇಂದ್ರ ಸರ್ಕಾರ ನೀಡುತ್ತೆ ಉಚಿತ ಗ್ಯಾಸ್ ಸಿಲಿಂಡರ್; ಇಂದೇ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಿರಿ!!

ಮಗನ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ನಡೆದಿದೆ.

Leave A Reply

Your email address will not be published.