Child Death: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಜೆಸಿಬಿ, ಮಗು ಸಾವು!!!

Gadaga News JCB Accident: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ನಿರ್ಲಕ್ಷ್ಯದಿಂದ ಜೆಸಿಬಿ ಚಲಾಯಿಸಿದ್ದು, ಇದರಿಂದ ಮಗುವಿನ ಪ್ರಾಣ ಹೋಗಿದೆ. ಈ ಘಟನೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಶಬ್ಬೀರ್‌ ನಗರದಲ್ಲಿ ನಡೆದಿದೆ.

ಮನ್ವಿತ್‌ ಮಂಜುನಾಥ್‌ ಏರಿಮನಿ (5 ವರ್ಷ) ಎಂಬ ಬಾಲಕನೇ ಚಾಲಕನ ಅಜಾಗರೂಕತೆಯಿಂದ ಸಾವು ಕಂಡಿದ್ದಾನೆ.

ಪಟ್ಟಣದ ಶಬ್ಬೀರ್‌ ನಗರದಿಂದ ಶಿರಹಟ್ಟಿ ಮಾಗಡಿ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಮಗುವನ್ನು ಗಮನಿಸದೆ ಚಾಲಕ ಜೆಸಿಬಿ ಚಲಾಯಿಸಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.