Murder: ಹೆಂಡತಿ ತುಂಡುಡುಗೆ ಧರಿಸಿದ್ದಕ್ಕೆ ಗಂಡನ ವಿರೋಧ; ಕೊಲೆಯಲ್ಲಿ ಅಂತ್ಯ!!!

Share the Article

Murder: ಹೆಂಡತಿ ತುಂಡುಡುಗೆ ಧರಿಸುತ್ತಾಳೆಂದು ಪತಿ ಮಹಾಶಯನೊಬ್ಬ ಕತ್ತು ಸೀಳಿ ಪತ್ನಿಯನ್ನೇ ಹತ್ಯೆಗೈದ ಘಟನೆಯೊಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ (22) ಕೊಲೆಯಾದ ಗೃಹಿಣಿ. ಜೀವನ್‌ ಎಂಬಾತ ನೇ ಕೊಲೆ ಮಾಡಿದ ಆರೋಪಿ. ತುಂಡು ಬಟ್ಟೆ ಧರಿಸಿ ಸಿಟ್ಟು ಮಾಡಿಕೊಂಡಿದ್ದ ಪತಿ ಆಕೆಯ ಜೊತೆ ಜಗಳವಾಡಿಕೊಂಡಿದ್ದ. ನಂತರ ಅದು ಕೊಲೆಯಲ್ಲಿ ಅಂತ್ಯಗೊಂಡಿದೆ. ನಿನ್ನೆ ಜ್ಯೋತಿ ಮಾಡರ್ನ್‌ ಉಡುಪು ಧರಿಸಿ ಹೊರಗೆ ಹೊರಟಿದ್ದಳು. ಆಗ ಜೀವನ್‌ ನಿನ್ನ ನಾನೇ ಡ್ರಾಪ್‌ ಮಾಡುತ್ತೇನೆಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಎಸ್ಕೇಪ್‌ ಆಗಿರುವುದು ವರದಿಯಾಗಿದೆ.

ಇವರಿಬ್ಬರ ಮದುವೆ ವರ್ಷದ ಹಿಂದೆ ನಡೆದಿತ್ತು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಇವರು, ನಂತರ ಗಲಾಟೆಗಳು ಪ್ರಾರಂಭವಾಗಿದೆ. ಜ್ಯೋತಿಗೆ ತುಂಡು ಬಟ್ಟೆ ಧರಿಸುವುದು, ಮಾಡರ್ನ್‌ ಉಡುಪು ಧರಿಸುವುದು ಇದು ಗಂಡನಾದ ಜೀವನ್‌ಗೆ ಇಷ್ಟ ಆಗುತ್ತಿರಲಿಲ್ಲ. ಈ ವಿಷಯಕ್ಕೆ ದಂಪತಿಗಳ ಮಧ್ಯೆ ಜಗಳ ನಡೆಯುತ್ತಿತ್ತು. ಆದರೆ ನಿನ್ನೆ ನಡೆದ ಜಗಳ ಅತಿರೇಕಕ್ಕೇರಿ ಕೊಲೆಯಲ್ಲಿ ಮುಗಿದಿದೆ. ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

 

Leave A Reply