Belagavi: 14 ವರ್ಷದ ಬಾಲಕ ನೇಣುಬಿಗಿದು ಆತ್ಮಹತ್ಯೆ- ಕಾರಣ ತಿಳಿದ್ರೆ ನೀವೂ ಶಾಕ್ ಆಗ್ತೀರಾ !!

Karnataka death news class 8 student commits suicide in Belagavi latest news

Share the Article

Belagavi: ತಂದೆ-ತಾಯಿ ಎಂದ ಮೇಲೆ ಮಕ್ಕಳಿಗೆ ತಿದ್ದಿ, ಬುದ್ದಿ ಹೇಳುವುದು ಸಹಜ. ಇದು ಅವರ ಕರ್ತವ್ಯ ಮಾತ್ರವಲ್ಲ ಜವಾಬ್ದಾರಿ ಕೂಡ. ಆದರೆ ಇಲ್ಲೊಂದೆಡೆ ತಾಯಿಯ ಬುದ್ದಿ ಮಾತೊಂದು ತನ ಮಗನ ಕುತ್ತಿಗೆಗೆ ಉರುಳಾಗಿದೆ.

ಹೌದು, ಬೆಳಗಾವಿ(Belagavi) ಜಿಲ್ಲೆಯ ಮೂಡಲ ಪಟ್ಟಣದ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಸಮರ್ಥ ಸುರೇಶ ಭಜಂತ್ರಿ (14)ಎಂಬ ವಿದ್ಯಾರ್ಥಿ ತನ್ನ ತಾಯಿ ಓದಿಕೋ ಎಂದು ಹೇಳಿದ ಬುದ್ದಿಮಾತಿಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಶ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್‌ನಲ್ಲಿ ನಡೆದಿದೆ.

ಅಂದಹಾಗೆ ಸಮರ್ಥನಿಗೆ ಮಗನಿಗೆ ದೀಪಾವಳಿ ರಜೆ (Deepavali) ಇದೆ ಅಂತ ತಿರುಗಬೇಡ, ಓದಿಕೋ ಎಂದು ತಾಯಿ (Mother) ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಆತ ಬೆಡ್‌ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಸದ್ಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: C T Ravi: ಬೇಡ ಅಂದ್ರೆ ರಾಜಕೀಯ ಬಿಡುತ್ತೇನೆ – ಅಚ್ಚರಿ ಹೇಳಿಕೆ ನೀಡಿದ ಸಿ ಟಿ ರವಿ !!

Leave A Reply