Dakshina kannada: ಉಜಿರೆ ಶಾಲೆಯ ಬಳಿ ವೇಗವಾಗಿ ಧಾವಿಸಿ ಬಂದ ಬೈಕ್ ! ಅಮ್ಮನ ಎದುರಲ್ಲೇ ಬೈಕ್ ಅಡಿಗೆ ಬಿದ್ದು ಸಾವನ್ನಪ್ಪಿದ 3 ನೇ ಕ್ಲಾಸ್ ವಿದ್ಯಾರ್ಥಿನಿ !

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಇಂದು ದಾರುಣ ಘಟನೆಯೊಂದು ನಡೆದಿದೆ. ಘಟನೆಯ ಪರಿಣಾಮ ತಾಯಿಯ ಎದುರಲ್ಲೇ ವಿದ್ಯಾರ್ಥಿನಿಯೋರ್ವಳು ಕೊನೆಯುಸಿರೆಳೆದಿರುವ ಮನಕಲಕುವ ಘಟನೆ ನಡೆದಿದೆ.

ಹೌದು, ಉಜಿರೆ (ujire) ಶಾಲೆಯ ಬಳಿ ವೇಗವಾಗಿ ಧಾವಿಸಿ ಬಂದ ಬೈಕೊಂದು 3 ನೇ ಕ್ಲಾಸ್ ವಿದ್ಯಾರ್ಥಿನಿಯ ಪ್ರಾಣವನ್ನು ಹೊತ್ತೊಯ್ದಿದೆ. ಅಮ್ಮನ ಎದುರಲ್ಲೇ ಬೈಕ್ ಅಡಿಗೆ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ.

3 ನೇ ತರಗತಿ ವಿದ್ಯಾರ್ಥಿನಿ ಅಂಕಿತಾ ಎಂಬಾಕೆಗೆ ಅ.27 ರಂದು (ಇಂದು) ಬದನಾಜೆ ಸರಕಾರಿ ಹಿ ಪ್ರಾ.ಶಾಲೆಯ ಎದುರು ಮಾರ್ಗ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿದ್ದು, ಘಟನೆ ಪರಿಣಾಮ ಬಾಲಕಿ ಮೃತಪಟ್ಟಿದ್ದಾರೆ. ಈಕೆಯನ್ನು ದಿ.ಅಶೋಕ ಮತ್ತು ಜಯಶ್ರೀ ದಂಪತಿಯ ಪುತ್ರಿ ಎಂದು ಹೇಳಲಾಗಿದೆ.

 

ಇದನ್ನು ಓದಿ: Free Electricity: ಇನ್ಮುಂದೆ ಈ ಜಿಲ್ಲೆಯ ಜನರಿಗಿಲ್ಲ ಉಚಿತ ಫ್ರೀ ಕರೆಂಟ್- ಮಹತ್ವದ ಆದೇಶ ಹೊರಡಿಸಿದ ಸರ್ಕಾರ !

Leave A Reply

Your email address will not be published.