Chaitra Fraud Case: ಹಿಡಿದ ಕೆಲಸ ನಿಲ್ಸೋ ಪ್ರಶ್ನೆಯೇ ಇಲ್ಲ, ಮತ್ತೆ ಬರ್ತೀನಿ ಎಂದ ಗೋವಿಂದ ಪೂಜಾರಿ ! ಈ ಮಾತು ಹೇಳಿದ್ದಾದರೂ ಯಾರಿಗೆ ?

Chaitra fraud case govinda Babu poojary said I will be back latest news

Chaitra Fraud Case: ಭಾಷಣಗಾರ್ತಿ ಚೈತ್ರಾ ಆಂಡ್‌ ಗ್ಯಾಂಗ್‌ನಿಂದ ಕೋಟಿ ಕೋಟಿ ಹಣ ವಂಚನೆಗೊಳಗಾದ (Chaitra Fraud Case) ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Poojari) ಅವರು ಸಂದೇಶವೊಂದನ್ನು ನೀಡಿದ್ದಾರೆ. ಅದೇನೆಂದರೆ ನಾನು ಮತ್ತೆ ಬಂದೇ ಬರ್ತೀನಿ, ಹಿಡಿದ ಕೆಲಸ ನಿಲ್ಲಿಸೋ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಸಂದೇಶವೊಂದನ್ನು ಫೇಸ್‌ಬುಕ್‌ನಲ್ಲಿ ನೀಡಿದ್ದಾರೆ. ಆದರೆ ಇದು ಯಾರಿಗೂ ಎಚ್ಚರಿಕೆ ರೂಪದಲ್ಲಿ ನೀಡಿದ್ದಲ್ಲ. ಬದಲಾಗಿ ತನ್ನ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಹೇಳಿರುವ ಸಂದೇಶ ಇದಾಗಿದೆ. ಹಾಗಾಗಿ ಕೆಲವೊಂದು ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಫೋಟೋಗಳನ್ನು ಅವರು ಇದರಲ್ಲಿ ಹಂಚಿಕೊಂಡಿದ್ದಾರೆ.

Chaitra Fraud Case
Image source: Vijayakarnataka

ಗೋವಿಂದ ಬಾಬು ಪೂಜಾರಿ ಬೈಂದೂರು ಭಾಗದ ಅಸಹಾಯಕರಿಗೆ ಕೆಲವೊಂದು ವರ್ಷಗಳಿಂದ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಕಷ್ಟದಲ್ಲಿದ್ದವರಿಗೆ ಮನೆ, ಶಾಲೆಗೆ ಪುಸ್ತಕ, ಕಿಟ್‌ ವಿತರಣೆ, ಜನರ ಕಷ್ಟಗಳಿಗೆ ಸ್ಪಂದಿಸುವುದು ಇಂತಹ ಸಮಾಜ ಸೇವಾ ಕಾರ್ಯಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ.

ಆದರೆ ಇತ್ತೀಚೆಗೆ ಅವರು ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಹಿಂದಿನ ಬಾರಿಯಂತೆ ಈ ಬಾರಿ ಕೂಡಾ ಗಣೇಶನ ಹಬ್ಬದಲ್ಲಿ ಜನರ ಜೊತೆ ಒಡನಾಟ ಇರಲಿಲ್ಲ. ಹಾಗಾಗಿ ಅವರು ನಾನು ಕೆಲವು ವಂಚಕರ ಕೈಗೆ ಸಿಕ್ಕಿದ್ದರಿಂದ ಜನರ ಮೇಲೆ ನನ್ನ ನಂಬಿಕೆ ಕಳೆದುಕೊಂಡಿಲ್ಲ. ನನಗೆ ಸೀಟು, ಸ್ಥಾನಮಾನ ಮುಖ್ಯ ಅಲ್ಲ, ಜನ ಸೇವೆಯೇ ಮುಖ್ಯ ಎಂಬ ಸಂದೇಶ ನೀಡುತ್ತಾ ಮತ್ತೆ ಬಂದಿದ್ದಾರೆ.

ಇದನ್ನೂ ಓದಿ: Surathkal: ಕಾರು ಅಪಘಾತ; ಚಾಲಕ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

Leave A Reply

Your email address will not be published.