Dakshina Kannada: ಸುಳ್ಯ ಕಾಂಗ್ರೆಸ್ ನಲ್ಲಿ ಮುಗಿಯದ ಭಿನ್ನಮತ: ಮಮತಾ ಗಟ್ಟಿ ಹೇಳಿಕೆಗೆ ಜಿ ಕೃಷ್ಣಪ್ಪ ಟಾಂಗ್ ಒಗ್ಗಟ್ಟು ಪ್ರದರ್ಶನದ ಸಭೆಯಲ್ಲೇ ಬಿಕ್ಕಟ್ಟು

Dakshina Kannada news Sullia political news G Krishnappa Denies Mamata Gattis Statement

Dakshina Kannada : ಸುಳ್ಯ ವಿಧಾನ ಸಭಾ ಚುನಾವಣೆ ಸಂದರ್ಭ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಗೆ ಮಾಡಿರುವ ಆರೋಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆಲವರನ್ನು ಕ್ರಮಬದ್ಧವಾಗಿಯೇ ಉಚ್ಛಾಟನೆ ಮಾಡಲಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಅವರು ಕೆಪಿಸಿಸಿಯ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಉಸ್ತುವಾರಿ ಮಮತಾ ಗಟ್ಟಿಯವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ(Dakshina Kannada news).

ಅವರು ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಮತಾ ಗಟ್ಟಿಯವರಿಗೆ ಮಾಹಿತಿಯ ಕೊರತೆ ಇದೆ.ಹಾಗಾಗಿ ಅವರು ಉಚ್ಚಾಟನೆ ಮಾಡಲು ಬ್ಲಾಕ್ ಕಾಂಗ್ರೇಸ್‌ನಿಂದ ಯಾವುದೇ ಶಿಫಾರಸ್ಸು ಹೋಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದರು.

ವರಿಷ್ಟರಿಗೆ ದೂರು ನೀಡಿರುವುದು ಸತ್ಯ

ಬ್ಲಾಕ್ ಅಧ್ಯಕ್ಷರ ಶಿಫಾರಸಿನಲ್ಲಿಯೇ ಉಚ್ಛಾಟನೆ ಪ್ರಕ್ರಿಯೆ ಆಗಬೇಕೆಂದಿಲ್ಲ. ಯಾರಿಗೆ ನೋವಾಗಿದೆಯೋ ಅವರು ದೂರು ನೀಡಿರುವುದು, ಆ ದೂರಿನ ಹಿನ್ನೆಲೆಯಲ್ಲಿ ಕ್ರಮ ಜರಗಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಯಾರಿಗೆ ನೋವಾಗಿದೆಯೋ ಅವರು ವರಿಷ್ಠರಿಗೆ ದೂರು ನೀಡಿರುವುದು ಸತ್ಯ. ಇದಕ್ಕೆ ಪಕ್ಷದ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮನ್ ಖಾನ್ ಕ್ರಮ ಕೈಗೊಂಡು, ನೋಟೀಸ್ ನೀಡಿದ್ದಾರೆ.

ಕೆಲವರು ಶಿಸ್ತು ಸಮಿತಿಯ ಎದರು ಹಾಜರಾಗುತ್ತೇವೆ ಎಂದು ಬರೆದುಕೊಟ್ಟಿದ್ದಾರೆ. ಇದೆಲ್ಲಾ ಜಿಲ್ಲಾಧ್ಯಕ್ಷರ ಗಮನಕ್ಕೆ ಬಂದೇ ನಡೆದ ಬೆಳವಣಿಗೆಯಾಗಿದೆ . ಎಲ್ಲವೂ ಕ್ರಮ ಬದ್ದವಾಗಿಯೇ ನಡೆದಿದೆ. ಆದರೆ ಕ್ರಮಬದ್ಧವಾಗಿ ಅವರನ್ನು ವಾಪಾಸ್ಸು ಕರೆಸಿಕೊಂಡಿಲ್ಲ. ಅದಕ್ಕೊಂದು ನಿಯಮವಿದೆ, ಅವರ‍್ಯಾರು ನಮ್ಮ ವಿರೋಧಿಗಳಲ್ಲ, ಪಕ್ಷ ವಿರೋಧಿ ಕೆಲಸ ಮಾಡಿರುವುದರಿಂದ ಅವರಿಗೊಂದು ಶಿಕ್ಷೆ ಆಗಬೇಕು ಎನ್ನುವುದು ನಮ್ಮ ಉದ್ಧೇಶವಾಗಿತ್ತು. ನಾನು ಯಾರಲ್ಲಿಯೂ ದ್ವೇಷಕಟ್ಟಿಕೊಳ್ಳುವುದಿಲ್ಲ , ನಮ್ಮಲ್ಲಿರುವ ಗೊಂದಲಗಳನ್ನು ಪರಿಹರಿಸಿಕೊಂಡು ಪಕ್ಷ ಕಟ್ಟುವ ಕಾರ್ಯ ಮಾಡುತ್ತೇವೆ ಎಂದರು.

ಸ್ವಲ್ಪಮಟ್ಟಿನ ಗೊಂದಲ ಸರಿಪಡಿಸುತ್ತೇವೆ

ಗುರುವಾರ ಕಡಬ ಅನುಗ್ರಹ ಸಭಾಭವನದಲ್ಲಿ ಕೆಪಿಸಿಸಿ ಸುಳ್ಯ ಉಸ್ತುವಾರಿ ಮಮತಾ ಗಟ್ಟಿ ಸಮ್ಮುಖದಲ್ಲಿ ನಡೆದ ರಂಪಾಟ, ಚೀರಾಟ, ಅಸಮಾಧಾನ ಸ್ಪೋಟಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷ್ಣಪ್ಪ ಅದು ನಮ್ಮ ಕುಟುಂಬದ ಸಮಸ್ಯೆ ಇದ್ದ ಹಾಗೆ, ಸ್ವಲ್ಪ ಗೊಂದಲವಾಗಿದೆ. ಇಲ್ಲಿನ ಬ್ಲಾಕ್ ಅಧ್ಯಕ್ಷರು ಯುವಕರು ಸ್ವಲ್ಪ ಬಿಪಿ ರೈಸ್ ಮಾಡಿಕೊಂಡಿದ್ದಾರೆ ಅಷ್ಟೇ. ಇದೆಲ್ಲ ನಡೆಯಬಾರದಿತ್ತು, ಇನ್ನು ಮುಂದೆ ಹಾಗೆಲ್ಲಾ ಆಗದ ಹಾಗೇ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕಡಬ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಒಂದು ತಿಂಗಳ ಒಳಗೆ ಡಯಾಲಿಸಿಸ್ ಸೆಂಟರ್ ವ್ಯವಸ್ಥೆ ಮಾಡಲಾಗುವುದು. ಕಾಡಾನೆಗಳು ಆಚೆ ಈಚೆ ಓಡಾಡಲು ರಾಷ್ಟ್ರೀಯ ಹೆದ್ದಾರಿಯ ಇಚ್ಲಂಪಾಡಿ, ಮಣ್ಣಗುಡ್ಡೆ, ಅಡ್ಡಹೊಳೆಗಳಲ್ಲಿ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಲು ಸಚಿವರಿಗೆ ಮನವಿ ಮಡಲಾಗಿದೆ. ಕಡಬ ತಾಲೂಕು ಕಛೇರಿಯಲ್ಲಿ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹಾಗೂ ಇಲ್ಲಿ ಅಗತ್ಯ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಸಚಿವರ ಗಮನಕ್ಕೆ ತರಲಾಗಿದೆ.

ಕಡಬದಲ್ಲಿ ಕೆ.ಎಸ್‌ಆರ್‌ಟಿಸಿ ನಿಲ್ದಾಣ ನಿಮಾಣ ಮಾಡುವ ನಿಟ್ಟಿನಲ್ಲಿ ಸೂಕ್ತ ಜಾಗ ನಿಗದಿಪಡಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ವಿವರಿಸಿದ ಕೃಷ್ಣಪ್ಪ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಮನೆಗೆ ತಲುಪಿಸುವ ಕಾರ್ಯವನ್ನು ಇನ್ನು ಮುಂದೆ ಗ್ರಾಮ ಮಟ್ಟದಲ್ಲಿ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೆಪಿಸಿಸಿ ಮಾಜಿ ಸದಸ್ಯ ಕೆಪಿ ಥೋಮಸ್, ರಾಜ್ಯ ಅಲ್ಪ ಸಂಖ್ಯಾತ ಘಟಕದ ಸಂಯೋಜಕ ಎಎಸ್ ಶರೀಫ್, ಕಡಬ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಮಾಜಿ ಅಧ್ಯಕ್ಷ ಎಚ್ ಆದಂ, ಹಿಂದುಳಿದ ವರ್ಗಗಳ ಅಧ್ಯಕ್ಷ ಪೂವಪ್ಪ ಕರ್ಕೇರ, ಕಿಸಾನ್ ಘಟಕದ ಅಧ್ಯಕ್ಷ ಭವಾನಿ ಶಂಕರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆಪಿ ಅಬ್ರಹಾಂ, ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ, ಕೊಯಿಲ ಗ್ರಾಮ ಪಂಚಾಯಿತಿ ಸಮಿತಿಯ ಅಧ್ಯಕ್ಷ ಕೆ ಬಶೀರ್, ಕೌಕ್ರಾಡಿ ಬೂತ್ ಅಧ್ಯಕ್ಷ ಚಾಕೋ ವಿ ಎನ್, ನೆಲ್ಯಾಡಿ ಸಮಿತಿ ಸದಸ್ಯ ಬಿನು ಚಾಕೋ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Kundapura name: ಚೈನ್ ಚೈತ್ರಾಳ ಹೆಸರೊಂದಿಗೆ ‘ಕುಂದಾಪುರ’ ಹೆಸರು ಬಳಸಬೇಕೋ ಬೇಡವೋ ?! ಕೋರ್ಟ್ ನಿಂದ ಬಂತು ಮಹತ್ವದ ತೀರ್ಪು !!

Leave A Reply

Your email address will not be published.