Murder Case: ಮಗಳಿಂದ ಅಪ್ಪನ ಕೊಲೆ ರಹಸ್ಯ ಬಯಲು! ಅಮ್ಮನ ಮೇಲೆ ಕೊಲೆ ಆರೋಪ ಹೊರಿಸಿದ್ಯಾಕೆ ಮಗಳು?!

Murder Case: ಕಳೆದ 6 ತಿಂಗಳ ಹಿಂದೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Vijaypur rural police station) ದಾಖಲಾಗಿದ್ದ ವ್ಯಕ್ತಿಯೊಬ್ಬರ ಮಿಸ್ಸಿಂಗ್ ಪ್ರಕರಣಕ್ಕೆ (missing case) ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳಿಂದ ಅಪ್ಪನ ಕೊಲೆ (Murder Case) ರಹಸ್ಯ ಬಯಲಾಗಿದೆ. ಕಾಣೆಯಾಗಿದ್ದ ವ್ಯಕ್ತಿಯನ್ನು ಆತನ ಹೆಂಡತಿಯೇ (Wife) ಮರ್ಡರ್ (Murder) ಮಾಡಿಸಿ, ಮಿಸ್ಸಿಂಗ್ ನಾಟಕವಾಡಿದ್ದಳು ಎಂದು ಮಗಳು ಆರೋಪಿಸಿದ್ದಾಳೆ.

ವಿಜಯಪುರ ತಾಲೂಕಿನ ಹೆಡಗಿಹಾಳ ಗ್ರಾಮದಲ್ಲಿ ಕಳೆದ ಫೆಬ್ರವರಿ 23 ರಂದು 40 ವರ್ಷದ ಜಕರಾಯ್‌ ದಳವಾಯಿ ಎಂಬಾತ ಕಾಣೆಯಾಗಿದ್ದ. ಹೆಂಡತಿ ಜಯಶ್ರೀಯನ್ನು ನೋಡೋದಕ್ಕೆ ಆಕೆಯ ತವರು ಬಸವನ ಬಾಗೇವಾಡಿಯ ಮನೆಗೆ ಹೋಗಿ ಬರ್ತಿನಿ ಎಂದವನು ಮತ್ತೆ ಬಾರಲೇ ಇಲ್ಲ, ಅಲ್ಲೇ ಕೊಲೆಯಾಗಿದ್ದ. ಆದರೆ, ಆತನ ಹೆಂಡತಿ ಜಯಶ್ರೀ ತನ್ನ ಗಂಡ ಜಕರಾಯ ಕೆಲಸಕ್ಕೆ ಹೋಗಿ ಬರ್ತೀನಿ ಎಂದಿದ್ದಾನೆ. ಇನ್ನೂ ಬಂದಿಲ್ಲ ಎಂದು ನಾಟಕವಾಡಿದ್ದಳು. ಈ ನಾಟಕ ಸತತ 6 ತಿಂಗಳ ಕಾಲ ನಡೆದಿತ್ತು.

ವಿಜಯಪುರ (vijayapura) ಗ್ರಾಮೀಣ ಠಾಣೆಯಲ್ಲಿ ಮಿಸ್ಸಿಂಗ್‌ ದೂರು ನೀಡಿ ನಾಟಕವಾಡಿದ್ದಾಳೆ. ಈ ವಿಚಾರ 12 ವರ್ಷದ ಮಗಳಿಗೆ ಗೊತ್ತಾಗಿದೆ. ಮಗಳಿಗೆ ತನ್ನ ಗುಟ್ಟು ಗೊತ್ತಾಗುತ್ತಿದ್ದಂತೆ ಜಯಶ್ರೀ ಭಯಪಟ್ಟು ಮಗಳು ಹಾಗೂ ಇನ್ನೊಬ್ಬ ಮಗನನ್ನ ಕಲ್ಲು ಕಟ್ಟಿ ಬಾವಿಗೆ ಹಾಕಿ, ಕೊಲ್ಲಲು ಯತ್ನಿಸಿದ್ದಾಳೆ. ಆದರೆ, ಬಾಲಕಿ ಬಚಾವ್ ಆಗಿ ಪೊಲೀಸರ ಎದುರು ಅಮ್ಮನ ಎಲ್ಲ ಕಳ್ಳಾಟ ಬಯಲು ಮಾಡಿದ್ದಾಳೆ. ಜಕರಾಯನ ಮಗಳು ತನ್ನ ತಾಯಿ ಜಯಶ್ರೀಯೇ ತಂದೆ ಜಕರಾಯನ ಮರ್ಡರ್‌ ಮಾಡಿರೋದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ನೀಡಿದ ಸುಳಿವು ಆಧರಿಸಿ ಜಯಶ್ರೀಯನ್ನು ವಿಚಾರಿಸಿದಾಗ ಭಾರೀ ಶಾಕಿಂಗ್ ಮಾಹಿತಿ ಬಯಲಾಗಿದೆ.

ಜಯಶ್ರೀಗೆ ಆಕೆಯ ತವರು ಊರಿನ ಡೋಂಗ್ರಿಸಾಬ್‌ ಜೊತೆಗೆ ಅನೈತಿಕ ಸಂಬಂಧವಿತ್ತು. ಇದು ಗಂಡನಿಗೆ ಗೊತ್ತಾಗಿ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಹೀಗಾಗಿಯೇ ಜಯಶ್ರೀ ಹಾಗೂ ಆಕೆಯ ಪ್ರಿಯಕರ ಡೋಂಗ್ರಿಸಾಬ್‌ ಇಬ್ಬರೂ ಸೇರಿ ಕೊಡಲಿಯಿಂದ ಕೊಚ್ಚಿ ಜಕರಾಯನನ್ನು ಕೊಂದಿದ್ದು, ನಂತರ ಆತನ ಬಾಡಿಯನ್ನ ಸುಟ್ಟು ಹಾಕಿ, ಬಾವಿಯೊಂದರಲ್ಲಿ ಎಸೆದಿರೋದಾಗಿ ಜಯಶ್ರಿ ಒಪ್ಪಿಕೊಂಡಿದ್ದಾಳೆ. ಸದ್ಯ ಜಯಶ್ರೀ ಹಾಗೂ ಪ್ರಿಯಕರ ಜೈಲು ಪಾಲಾಗಿದ್ದಾರೆ.

Leave A Reply

Your email address will not be published.