Sowjanya case: ಡಾ.ಹೆಗ್ಗಡೆ ಅವರ ರಾಜ್ಯಸಭಾ ಸದಸ್ಯತ್ವದಿಂದ ಕೆಳಗಿಳಿಸಿ!ನನ್ನನ್ನು ಮೋದಿಯವರ ಬಳಿಗೆ ಕರೆದುಕೊಂಡು ಹೋಗಿ -ಸೌಜನ್ಯ ತಾಯಿ ಮನವಿ
Belthangady news Sowjanya case Drop veerendra Heggade from Rajya Sabha Take me to Modi Sowjanya mother kusumavathi pleased
![Sowjanya case](https://hosakannada.com/wp-content/uploads/2023/08/IMG-20230827-WA0046.jpg)
![](https://hosakannada.com/wp-content/uploads/2024/07/First.jpeg)
Sowjanya case : ಸೌಜನ್ಯ ಪ್ರಕರಣದ (Sowjanya case)ಮರುತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಭಾಗವಹಿಸಿ ಮಾತನಾಡಿದರು.
![](https://hosakannada.com/wp-content/uploads/2024/07/Middle.jpeg)
ಡಾ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಕೆಳಗಿಳಿಸಬೇಕು.ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ನಮ್ಮನ್ನು ಕರೆದುಕೊಂಡು ಹೋಗುವಂತೆ ಬಿಜೆಪಿ ಮುಖಂಡರ ಬಳಿ ಅವರು ಮನವಿ ಮಾಡಿದರು.
ಈ ಸಭೆಯಲ್ಲೂ ಕುಸುಮಾವತಿ ಅವರು ಡಾ.ಹೆಗ್ಗಡೆ ಕುಟುಂಬದ ಮೇಲೆ ಗುರುತರ ಆರೋಪ ಮಾಡಿದರು.
ಸೌಜನ್ಯ ಪ್ರಕರಣದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಬೇಕು, ನಾನು ಅಥವಾ ಹರೀಶ್ ಪೂಂಜ ಆ ಕೆಲ್ಸ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾಗಿ ನ್ಯಾಯಕ್ಕೆ ಆಗ್ರಹ ಮಾಡ್ತೇವೆ ಎಂದು ವೇದವ್ಯಾಸ ಕಾಮತ್ ಹೇಳಿದರು.