Kaushal Kishore: ಆಯುರ್ವೇದದಿಂದ ಬರೋಬ್ಬರಿ 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ! ಮೋದಿ ನೀಡಿದ ಸಲಹೆ ಏನು ಗೊತ್ತಾ?

Kaushal Kishore: ದೇಹದ ಅತಿಯಾದ ತೂಕವನ್ನು ಇಳಿಸಿಕೊಳ್ಳಲು, ಫಿಟ್ ಆಗಿ ಕಾಣಲು ಅನೇಕರು ಜಿಮ್ ಮೊರೆಹೋದರೆ, ಕೆಲವರು ಯೋಗಾಸನ, ಎಕ್ಸಸೈಜ್ ಮಾಡೋದ್ರು ಮೂಲಕ ಇದನ್ನು ಸಾಧಿಸುತ್ತಾರೆ. ಇನ್ನು ಸಿರಿವಂತರು ಸರ್ಜರಿಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬರು ನಮ್ಮ ಕೇಂದ್ರ ಮಂತ್ರಿ(Union Minister) ಗಳು ಆಯುರ್ವೇದ ಹಾಗೂ ಆಹಾರ ಪಥ್ಯದ ಮೂಲಕ ಬರೋಬ್ಬರಿ 22 ಕೆಜಿಯಷ್ಟು ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಹೌದು, ಆಯುರ್ವೇದ ಆಹಾರ ಪಥ್ಯದಿಂದಾಗಿ (Ayurvedic diet) ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ (Union Minister) ಕೌಶಲ್ ಕಿಶೋರ್ (Kaushal Kishore) ಅವರು 22 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅವರು ತೂಕ ಕಡಿಮೆ (Weight Loss) ಮಾಡಿಕೊಂಡಿರುವ ವಿಷಯವನ್ನು ಖುದ್ದಾಗಿ ತಾವೇ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಟ್ವೀಟ್ ಮಾಡಿದ್ದಾರೆ.

ಟ್ವಿಟ್(Twit) ನಲ್ಲಿ ಸಚಿವರು ತಾವು ಮೊದಲಿದ್ದ ಹಾಗೂ ತೂಕ ಇಳಿಸಿಕೊಂಡ ನಂತರದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ತೂಕ ಇಳಿಸಲು ನನಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರೇ ಸಲಹೆ ನೀಡಿದ್ದರು ಎಂದಿದ್ದಾರೆ. ಈ ಸಲಹೆ ಮೇರೆಗೆ ನಾನು 2021ರಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರವೇಶ ಪಡೆದೆ. ಅದಾದ ಬಳಿಕ ಸಂಸ್ಥೆಯ ಸೂಚಿಸಿದ ಆಹಾರ ಕ್ರಮವನ್ನು ಅನುಸರಿಸಲು ಪ್ರಾರಂಭಿಸಿದೆ. ಇದರಿಂದಾಗಿ 2021ರ ಮೊದಲು 96 ಕೆಜಿ ಇದ್ದ ನಾನು, ಈಗ 22 ಕೆಜಿ ಕಳೆದುಕೊಂಡು 74 ತೂಕ ಹೊಂದಿದ್ದೇನೆ. ನಾನು ಮೊದಲಿಗಿಂತ ಫಿಟ್ ಆಗಿದ್ದೇನೆ ಹೇಳಿದ್ದಾರೆ.

ಆಯುರ್ವೇದವು ಭಾರತದಲ್ಲಿ ಹುಟ್ಟಿದ ಔಷಧ ಮತ್ತು ಚಿಕಿತ್ಸಾ ಪದ್ಧತಿಯಾಗಿದೆ. ಆಯುರ್ವೇದ ಆಧಾರಿತ ಚಿಕಿತ್ಸೆಯು ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಆಧರಿಸಿ ರೂಪಿಸಲಾಗುತ್ತದೆ ಮತ್ತು ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಆಧುನಿಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ. ಪ್ರಾಚೀನ ಭಾರತೀಯ ವಿಜ್ಞಾನದ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು, ಅಧಿಕ ಕಫ ದೋಷದ ಕಾರಣದಿಂದ ಉಂಟಾಗುತ್ತದೆ. ಆದ್ದರಿಂದ ಕೆಲವು ಪಥ್ಯಗಳನ್ನು ಅನುಸರಿಸುವ ದೇಹದ ಬೊಜ್ಜನ್ನು ಕರಗಿಸಬಹುದು. ಆಯುರ್ವೇದ ತಜ್ಞರ ಪ್ರಕಾರ, ಕಫ ದೋಷವಿರುವ ಜನರು ಹಸಿವಿನಿಂದ ಬಳಲಬಾರದು ಬದಲಿಗೆ ಅವರ ದೇಹ ಪ್ರಕಾರ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತಿನ್ನಬೇಕು.

ಇದನ್ನೂ ಓದಿ : ಮುಸಲ್ಮಾನರಿಂದ ಹಿಂದೂ ನಾಟಕ ಪ್ರದರ್ಶನ ! ಭಾವೈಕ್ಯತೆ ಸಾರೋ ಈ ನಾಟಕದ ಪಾತ್ರಧಾರಿಗಳೆಲ್ಲರೂ ಮುಸ್ಲಿಂಮರು!

Leave A Reply

Your email address will not be published.