Astro Tips: ಗುರುವಾರ ಬಾಳೆ ಮರಕ್ಕೆ ಈ ರೀತಿ ಪೂಜೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ಮಾಯ

ಪ್ರತಿಯೊಬ್ಬರ ಆಚರಣೆ, ನಂಬಿಕೆ ವಿಭಿನ್ನ ವಾಗಿರುತ್ತದೆ. ಆದರೂ ಕೂಡ ನಮ್ಮ ಮನೆಯಲ್ಲಿ ದೇವರ ಕೃಪೆ ಸದಾ ಇರಬೇಕು. ಹಾಗೆಯೇ ಮನೆಯವರ ಆರೋಗ್ಯ, ಐಶ್ವರ್ಯ ಸಮೃದ್ಧಿಯಾಗಿ ಶುಭ ಶಕುನಗಳು ನಡೆಯಬೇಕೆಂದು ಸಾಮಾನ್ಯವಾಗಿ ಹೆಚ್ಚಿನವರು ಅಂದುಕೊಳ್ಳುತ್ತಾರೆ. ಹಾಗಾಗಿ, ಪೂಜೆ ಪುನಸ್ಕಾರ, ವ್ರತ ಆಚರಣೆ ಕೂಡ ಮಾಡುತ್ತಾರೆ.

ನಿಮ್ಮ ಮನೆಯಲ್ಲಿ ಕೂಡ ಲಕ್ಷ್ಮಿ ನೆಲೆಸಲು ಈ ಸರಳ ವಿಧಾನ ಅನುಸರಿಸಿ ಪ್ರಯೋಜನ ನೀವೇ ಕಂಡುಕೊಳ್ಳಿ.ನಿಮ್ಮ ಹಿತ್ತಲಲ್ಲಿಯೆ ಇರುವ ಬಾಳೆ ಗಿಡದಿಂದ ಆಗುವ ಪ್ರಯೋಜನದ ಬಗ್ಗೆ ನಿಮಗೆ ತಿಳಿದಿದೆಯೇ?? ಅದರಲ್ಲಿ ಕೂಡ ಗುರುವಾರದ ಮಹಿಮೆ ನೀವು ತಿಳಿಯಲೇ ಬೇಕು.

ಹೌದು!!..ಗುರುವಾರ ವಿಷ್ಣುವಿಗೆ ಸಮರ್ಪಿತವಾಗಿದ್ದು, ಈ ದಿನ ಆಲದ ಮರವನ್ನು ಪೂಜಿಸುವ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಜ್ಯೋತಿಷ್ಯದ ಪ್ರಕಾರ ಬಾಳೆ ಮರದ ಪರಿಹಾರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದಾಗಿದೆ.

ಹಿಂದೂ ಧರ್ಮದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರಲ್ಲಿ ಕೂಡ ಕೆಲ ಮರ ಗಿಡಗಳಲ್ಲಿ ದೇವರು ಮತ್ತು ದೇವತೆಗಳು ನೆಲೆಸಿದ್ದಾರೆಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ವಿಶೇಷ ದಿನದಂದು ಅವುಗಳನ್ನು ಭಕ್ತಿಯಿಂದ ಪೂಜಿಸಿದರೆ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಗುರುವಾರ ಭಗವಾನ್ ವಿಷ್ಣು ಮತ್ತು ದೇವಗುರು ಬೃಹಸ್ಪತಿಗೆ ಸಮರ್ಪಿಸಲಾಗಿದ್ದು, ಈ ದಿನ ಆಲದ ಮರವನ್ನು ಪೂಜಿಸಿ ಪರಿಹಾರ ಇತ್ಯಾದಿಗಳನ್ನು ಮಾಡುವುದರಿಂದ ವಿಷ್ಣುವಿನ ಅನುಗ್ರಹ ನಿಮಗೆ ದೊರೆಯಲಿದೆ.

ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಗುರುವಾರದಂದು ಬಾಳೆಗಿಡಕ್ಕೆ ಸಂಬಂಧಿಸಿದ ಕೆಲವು ಪರಿಹಾರ ಕ್ರಮ ಕೈಗೊಂಡರೆ ಯಾವುದೇ ವ್ಯಕ್ತಿಯಾಗಿರಲಿ, ವಿಷ್ಣುವಿನ ಆಶೀರ್ವಾದವನ್ನು ಖಂಡಿತ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಇದರ ಜೊತೆಗೆ ಭಕ್ತರ ಇಷ್ಟಾರ್ಥಗಳು ಕೂಡ ನಡೆಯಲಿವೆ.

ಇದರೊಂದಿಗೆ ವ್ಯಕ್ತಿಯು ಆರ್ಥಿಕ ಸಮಸ್ಯೆಗಳಿಂದ ಮುಕ್ತನಾಗುವುದಲ್ಲದೆ, ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಕೂಡ ಲಭ್ಯವಾಗುತ್ತದೆ. ಲಕ್ಷ್ಮಿ ಮಾತೆ ವಿಷ್ಣುವಿನ ಪತ್ನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದ್ದು, ಗುರುವಾರದಂದು ಶ್ರೀ ಹರಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿದೇವಿಯೂ ಪ್ರಸನ್ನಳಾಗಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾಳೆ. ಗುರುವಾರ ಬಾಳೆಗಿಡಕ್ಕೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳ ಬಗ್ಗೆ ತಿಳಿದು ಅನುಸರಿಸಿದರೆ ಉತ್ತಮ.

ಬಾಳೆಮರಕ್ಕೆ ಸಂಬಂಧಿಸಿದ ಪರಿಹಾರ ಕ್ರಮಗಳು
*. ಗುರುವಾರದಂದು ಬಾಳೆಗಿಡವನ್ನು ಪೂಜಿಸುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಸಂತೋಷ ನೆಲೆಸುವುದರ ಜೊತೆಗೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ.

*. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಾಳೆಗಿಡವನ್ನು ನೆಟ್ಟರೆ ಆ ಮನೆಯಲ್ಲಿ ಎಂದಿಗೂ ದುಃಖ ಮತ್ತು ಬಡತನ ಇರುವುದಿಲ್ಲ ಎಂಬ ನಂಬಿಕೆ ಇದೆ.

*. ನೀವು ಮನೆಯಲ್ಲಿ ಸಂತೋಷ-ಸಮೃದ್ಧಿ ಮತ್ತು ಸಂಪತ್ತು ಬಯಸಿದರೆ, ಬಾಳೆ ಮರದ ಬೇರನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಮೊದಲು ಗಂಗಾಜಲದಿಂದ ಬೇರನ್ನು ತೊಳೆದು ಬೇರಿಗೆ ಹಳದಿ ಬಣ್ಣದ ದಾರವನ್ನು ಕಟ್ಟಬೇಕು. ಇದರ ನಂತರ ಅದನ್ನು ಹಣ ಇರಿಸುವ ಸ್ಥಳದಲ್ಲಿ ಇರಿಸಬೇಕು. ಈ ಪರಿಹಾರವನ್ನು ಗುರುವಾರ ಮಾಡಬೇಕಾಗುತ್ತದೆ.

*.ಗುರುವಾರ ಸ್ನಾನ ಇತ್ಯಾದಿಗಳ ನಂತರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಮತ್ತು ಹಳದಿ ಬಣ್ಣದ ಬಟ್ಟೆಯಿಂದ ನಿಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು. ಈ ಬಳಿಕ ಬಾಳೆ ಮರದ ಬಳಿಗೆ ಹೋಗಿ ಕೈಮುಗಿದು ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಆಸೆ ಬಹುಬೇಗನೇ ಈಡೇರುತ್ತದೆ.

Leave A Reply

Your email address will not be published.