ಅಕ್ಕನ ಗಂಡನ ಜೊತೆ ಪ್ರೇಮದಾಟವಾಡಿ ವರಿಸಿ, ಈಗ ಕೊರಿಯರ್ ಹುಡುಗನ ಜೊತೆ ಎಸ್ಕೇಪ್ ಆದ ಸುಶಿಕ್ಷಿತೆ!!!

ಮಳ್ಳಿ ಮಳ್ಳಿ ಮಿಂಚುಳ್ಳಿ…ಎಂಬ ಮಾತಿನಂತೆ ತನ್ನ ಮಾತಿನಲ್ಲೇ ಪ್ರೇಮದ ಬಲೆಯಲ್ಲಿ ಬೀಳಿಸಿ , ಇಬ್ಬರು ಯುವಕರ ಜೀವನದಲ್ಲಿ ನವರಂಗಿ ಆಟವಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ತಮ್ಮ ಮಗಳ ಪ್ರೇಮ ಪುರಾಣಕ್ಕೆ ಪೋಷಕರೇ ಹೈರಾಣಾಗಿ ತಮ್ಮ ಮಗಳನ್ನು ತಮಗೆ ಒಪ್ಪಿಸುವಂತೆ ಪೊಲೀಸ್‌ ಠಾಣೆ ಎದುರು ಪರಿ ಪರಿಯಾಗಿ ಕೇಳಿಕೊಂಡರು ಕೂಡ ಮಗಳು ಮಾತ್ರ ಜಪ್ಪಯ್ಯ ಅಂದರೂ ನಾನು ಬರಲ್ಲ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಹೇಳಿ ಪ್ರೀತಿಸಿದಾತನ ಜೊತೆ ಹೊರಟು ಹೋಗಿರುವ ಪ್ರೇಮ ಪ್ರಕರಣ ವರದಿಯಾಗಿದೆ.

ಹೌದು, ಸ್ವಂತ ತನ್ನ ಅಕ್ಕನ ಗಂಡನನ್ನೇ ಪ್ರೀತಿಯ (Love) ಸುಳಿಗೆ ಸಿಲುಕಿಸಿ ಮದುವೆಯಾಗಿದ್ದ ಮಹಿಳೆ (Woman) ಮತ್ತೆ ಕೆಲ ದಿನಗಳ ಬಳಿಕ ಕೊರಿಯರ್‌ ಬಾಯ್‌ ಜೊತೆ ಪ್ರೇಮ ಪುರಾಣದಲ್ಲಿ ತೊಡಗಿ ಆತನನ್ನೂ ಸಹ ವರಿಸಿ, ಇಬ್ಬರು ಗಂಡಂದಿರ ಜೊತೆಗೆ ಡಬಲ್‌ ಗೇಮ್‌ ಆಡುತ್ತಿದ್ದ ಪ್ರಸಂಗ ಜಿಲ್ಲಾ ಕೇಂದ್ರದಲ್ಲಿ ವರದಿಯಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಣಿಗಾನಹಳ್ಳಿ ನಿವಾಸಿ ಜಯಮ್ಮ ಹಾಗೂ ವಿ ನಾರಾಯಣಪ್ಪ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡ ಮಗಳು ಮಂಜುಳಾಳನ್ನು ಆಂಧ್ರದ ವಿ ಕೋಟೆ ಗ್ರಾಮದ ಸುಬ್ರಮಣ್ಯಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದಾರೆ.ಮಂಜುಳಾರ ಕೊನೆಯ ತಂಗಿಯಾಗಿದ್ದ ದಿವ್ಯಾ ಬಿ.ಎಡ್…. ಎಂ.ಎಸ್ಸಿ ಪದವೀಧರೆ, ಕೈ ತುಂಬ ಸಂಬಳ ಇದ್ದ ಡಿ.ಸಿ.ಸಿ ಬ್ಯಾಂಕ್‌ ನಲ್ಲಿ ಉದ್ಯೋಗಿಯಾಗಿದ್ದು, ಸ್ವತಃ ತನ್ನ ಅಕ್ಕನ ಗಂಡ ಬಾವ ಸುಬ್ರಮಣ್ಯ ನನ್ನು ಪ್ರೀತಿಸಿದ ಜೊತೆಗೆ ಕಾಡಿ ಬೇಡಿ ಅತ್ತು ಕರೆದು ಭಾವನನ್ನೇ ಮದುವೆ ಕೂಡ ಮಾಡಿಕೊಂಡಿದ್ದಾಳೆ.

ಈ ನಡುವೆ ಮದುವೆಯಾಗಿ ಕೇವಲ ಹತ್ತು ತಿಂಗಳಲ್ಲೇ ಪರಿಚಿತನಾದ ಕೊರಿಯರ್‌ ಬಾಯ್‌ ಚಂದ್ರಶೇಖರ್‌ ಎಂಬುವರನ್ನು ಪ್ರೀತಿಸಿದ್ದಾಳೆ. ಈ ನಡುವೆ ಆಕೆಯ ಪೋಷಕರು ದಿವ್ಯಾಳನ್ನು ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿ.ಸಿ.ಸಿ ಬ್ಯಾಂಕ್‌ ಗೆ ವರ್ಗಾವಣೆ ಮಾಡಿಸಿದ್ದಾರೆ. ಅಲ್ಲಿಯೂ ದಿವ್ಯ ಕೊರಿಯರ್‌ ಬಾಯ್‌ ಜೊತೆ ತನ್ನ ಪ್ರೇಮ ಪುರಾಣ ಮುಂದುವರೆಸಿದ್ದು, ದಿವ್ಯಾ-ಚಂದ್ರಶೇಖರ್‌ ಪ್ರೇಮಕ್ಕೆ, ಮರು ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಇದರಿಂದ ಆಕೆಯ ಪೋಷಕರು ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದು, ಇಬ್ಬರೂ ಜೂನ್‌ 10ರಂದೇ ಮದುವೆ ಆಗಿದ್ದು, ಆಗಸ್ಟ್ 10ರಂದು ಬಂಗಾರಪೇಟೆಯಲ್ಲಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ತಮ್ಮನ್ನು ತಮ್ಮ ಪಾಡಿಗೆ ಬದುಕಲು ಬಿಡಿ ಎಂದು ಪೊಲೀಸರು ಹಾಗೂ ತಂದೆ ತಾಯಿಯ ಎದುರು ಮಹಿಳೆ ನಾಟಕವಾಡಿದ್ದಾಳೆ.

ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆ ಮುಂದೆ ನಮ್ಮ ಮಗಳನ್ನು ನಮ್ಮ ಜೊತೆ ಕಳುಹಿಸಿ ಕೊಡಿ ಎಂದು ದಿವ್ಯಾಳ ವೃದ್ದ ತಂದೆ ತಾಯಿ, ಅತ್ತು ಕರೆದು ಗೋಳಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಮಗಳು ಉಳಿದವರನ್ನು ಗೋಳಾಡಿಸಿ ತನ್ನ ಅಕ್ಕನ ಜೀವನಕ್ಕೆ ಬೆಂಕಿ ಹಚ್ಚಿ ಅದರಲ್ಲಿ ಚಳಿ ಕಾಯಿಸಿಕೊಂಡು,ಇದೀಗ ಮತ್ತೊಬ್ಬ ನೊಡನೆ ಓಡಿ ಹೋಗಿದ್ದು, ಇನ್ನೂ ಅವನಿಗೆ ಯಾವಾಗ ಕೈಗೆ ಚಿಪ್ಪು ನೀಡುತ್ತಾಳೆ ತಿಳಿಯದು.

Leave A Reply

Your email address will not be published.