ಪ.ಪಂ.,ಪ.ಜಾ.ವರ್ಗದವರ 10 ಸೆಂಟ್ಸ್ ಜಾಗ ಭೂಪರಿವರ್ತನೆಗೆ ಸರಕಾದಿಂದ ಗ್ರೀನ್ ಸಿಗ್ನಲ್

ಬೆಂಗಳೂರು : ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದವರ 10 ಸೆನ್ಸ್ ಜಾಗ ಭೂಪರಿವರ್ತನೆ ಮಾಡಲು ಸರ್ಕಾರ ದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಈ ಅವಕಾಶ ವಾಸದ ಮನೆ ನಿರ್ಮಾಣದ ಉದ್ದೇಶಕ್ಕೆ ಮಾತ್ರ ಇರಲಿದೆ.ಈ ಕುರಿತಂತೆ ವಿವಿಧ ಜನಪ್ರತಿನಿಧಿಗಳು, ಸಂಘಟನೆಗಳು ಸರಕಾರಕ್ಕೆ ಮನವಿ ಮಾಡಿತ್ತು. ಇದೀಗ ಸರಕಾರ ಅವಕಾಶ ನೀಡಿದೆ.

ಅಲ್ಲದೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಈ ವಿಚಾರದ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ‌ ಮಾಡಿದ್ದರು,ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಅವರು ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು.

ಭೂಪರಿವರ್ತನೆಯಾಗದೇ ಮನೆ ನಿರ್ಮಾಣಕ್ಕೆ ಯಾವುದೇ ಬ್ಯಾಂಕ್‌ಗಳಿಂದ ಲೋನ್ ಪಡೆಯಲು ಸಮಸ್ಯೆಯಾಗುತ್ತಿತ್ತು. ಇದೀಗ ಆ ಸಮಸ್ಯೆ ಪರಿಹಾರವಾಗಿದೆ.

Leave A Reply

Your email address will not be published.