Health Tip : ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆ ಕಾಡೋದು ಖಂಡಿತ!!!

ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಹರಸಾಹಸ ಪಡುತ್ತಿದ್ದಾನೆ ಅಂದರೆ ತಪ್ಪಾಗಲಾರದು. ಯಾಕೆಂದರೆ ಈಗಿನ ಆಧುನಿಕ ಜಗತ್ತಿನಲ್ಲಿ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಅಲ್ಲದೆ ಆಹಾರ ವಸ್ತುಗಳು ದುಬಾರಿ ಆಗುತ್ತಲೇ ಇವೆ. ಆದರೂ ಮನುಷ್ಯನಿಗೆ ಆರೋಗ್ಯ ಎನ್ನುವುದು ಮುಖ್ಯ ಆಗಿದೆ.

ಮುಖ್ಯವಾಗಿ ನಾವು ತಿನ್ನುವ ಆಹಾರ ವಸ್ತುವಿನಲ್ಲಿ ಹಣ್ಣುಗಳು ಸಹ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ ಇವುಗಳಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಅದರಲ್ಲೂ ಪೇರಲೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು. ಹಾಗಾಂತ ಅತಿಯಾಗಿ ತಿಂದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಹೌದು ಪೇರಳೆಯಲ್ಲಿ ಹಲವು ಔಷಧೀಯ ಗುಣಗಳಿವೆ.
ಪೇರಳೆ ಸೇವನೆಯಿಂದ ಆಗುವ ಪ್ರಯೋಜನಗಳು :
• ಇದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ನಮ್ಮ ದೇಹದ ತೂಕವನ್ನು ಸ್ಥಿರವಾಗಿಡಲು ಪೇರಳೆ ಹಣ್ಣು ತುಂಬಾ ಸಹಕಾರಿಯಾಗಿದೆ.ಹಾಗಾಗಿ ಪೇರಳೆ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
• ವಿಟಮಿನ್ ‘ಸಿ’ ಸಮೃದ್ಧ ವಿಟಮಿನ್ ‘ಸಿ’ ಸಮೃದ್ಧವಾಗಿರುವ ಇದು ರೋಗವನ್ನು ಉಂಟುಮಾಡುವ ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರಗಳನ್ನು ನಾಶಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
• ಈ ಹಣ್ಣಿನಲ್ಲಿರುವ ಲೈಕೋಪೀನ್, ಕ್ವೆರ್ಸೆಟಿನ್, ವಿಟಮಿನ್ ‘ಸಿ’ ಮತ್ತು ಇತರ ಪಾಲಿಫಿನಾಲ್‌ಗಳು ಅತ್ಯುತ್ತಮ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ.
• ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುತ್ತವೆ.
• ಸ್ತನ ಕ್ಯಾನ್ಸರ್ ಕೋಶಗಳು ನಾಶವಾಗುತ್ತವೆ.
• ಮಧುಮೇಹಿಗಳಿಗೆ ಸಹಾಯಕ ಮಧುಮೇಹಿಗಳಿಗೆ ಪೇರಳೆ ಹಣ್ಣು ಅತ್ಯುತ್ತಮ ಆಹಾರ.
• ಇದು ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟವನ್ನುಸುಧಾರಿಸುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
• ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಾದ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪೇರಳೆ ಹಣ್ಣನ್ನು ಸಹ ಬಳಸಲಾಗುತ್ತದೆ.
• ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.

ಆದರೆ ಪೇರಳೆಯ ಹೆಚ್ಚಿನ ಸೇವನೆ ಒಳ್ಳೆಯದಲ್ಲ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ದೇಹಕ್ಕೆ ಇನ್ನೂ ಹಲವು ಪ್ರಯೋಜನಗಳನ್ನು ನೀಡುವ ಪೇರಳೆವನ್ನು ಹೆಚ್ಚು ತಿನ್ನಬೇಡಿ. ಪೇರಳೆಯನ್ನು ಹೆಚ್ಚು ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳು ಸಹ ಹಲವಾರು. ಹೆಚ್ಚು ಪೇರಳೆವನ್ನು ತಿಂದರೆ ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಫ್ರಕ್ಟೋಸ್ ಎಂಬ ಸಕ್ಕರೆಯ ಒಂದು ವಿಧವು ನಾವು ಅದನ್ನು ಹೆಚ್ಚು ತಿಂದಾಗ ಸುಲಭವಾಗಿ ಜೀರ್ಣವಾಗುವುದಿಲ್ಲ.

ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಳ ದೇಹದಲ್ಲಿ ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ. ಆದರೆ ಕೆಲವು ಆರೋಗ್ಯ ಅಧ್ಯಯನಗಳು ಅತಿಯಾಗಿ ಪೇರಳೆಯನ್ನು ತಿನ್ನುವುದರಿಂದ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಅತಿಸಾರ ಸಮಸ್ಯೆ ಕೆಲವರಿಗೆ ಪೇರಳೆಯನ್ನು ತಿಂದಾಗ ಅಥವಾ ಅತಿಯಾಗಿ ತಿಂದಾಗ ಅತಿಸಾರ ಅಥವಾ ಕರುಳಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಪೇರಲೆಯಲ್ಲಿರುವ ಬೀಜಗಳಿಂದ ಉಂಟಾಗುತ್ತದೆ. ಹಣ್ಣಿಗೆ ಆ ಬೀಜಗಳಿರುವುದು ಅವಶ್ಯವಿದ್ದರೂ ಅದನ್ನು ಅತಿಯಾಗಿ ತಿಂದಾಗ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಎಂದು ನುರಿತ ತಜ್ಞರ ಅಭಿಪ್ರಾಯ ಆಗಿದೆ.

Leave A Reply

Your email address will not be published.