ಮಂಗಳೂರು । ಹಿಂದೂ ಯುವತಿಯೊಂದಿಗೆ ಮಜಾ ಮಾಡಲು ಬಸ್ಸಿನಲ್ಲಿ ಹೊರಟ ಮುಸ್ಲಿಂ ಯುವಕ |
ಆಧಾರ್ ಫೋರ್ಜರಿ ಮಾಡಿಸಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಭಜರಂಗದಳ ಹುಡುಗರಿಂದ ದಾಳಿ

ಮಂಗಳೂರು: ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯೊಂದಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದ ಘಟನೆಯೊಂದು ನಗರದಲ್ಲಿ ನಡೆದಿದೆ.

ಅಷ್ಟು ಮಾತ್ರವಲ್ಲದೇ ಈ ಯುವಕ ತನ್ನ ಆಧಾರ್ ಕಾರ್ಡ್ ಫೋರ್ಜರಿ ಮಾಡಿಸಿ ಮುಸ್ಲಿಂ ಹೆಸರನ್ನು ಹಿಂದೂ ಮಾಡಿದ್ದಾನೆ ಎಂಬ ಆರೋಪ ಕೂಡಾ ಕೇಳಿ ಬರುತ್ತಾ ಇದೆ. ಹಿಂದೂ ಹುಡುಗಿಯೊಂದಿಗೆ ಬೆಂಗಳೂರಿಗೆ ಹೊರಟ ಮುಸ್ಲಿಂ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಥಳಿಸಿದ್ದು, ಈ ಘಟನೆ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿದೆ.

ಮುಸ್ಲಿಂ ಯುವಕನೋರ್ವ ತನ್ನ ಆಧಾರ್ ಕಾರ್ಡ್ ಫೋರ್ಜರಿ ಮಾಡಿಸಿ ಹಿಂದೂ ಹುಡುಗಿಯೊಂದಿಗೆ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳುವ ಸುದ್ದಿ ಹೇಗೋ ತಿಳಿದ ಈ ಬಜರಂಗದಳದ ಕಾರ್ಯಕರ್ತರು ಮುಸ್ಲಿಂ ಯುವಕನನ್ನು ಬಸ್ಸಿನಿಂದ ಹೊರಗೆ ಎಳೆದು ತಂದು ನಂತರ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Leave A Reply

Your email address will not be published.