ಚಾಮುಂಡೇಶ್ವರಿ ಕ್ರಿಯೇಷನ್ಸ್ ಪಡುಬೆಟ್ಟು ನೆಲ್ಯಾಡಿ ನಿರ್ಮಾಣದ ‘ಮರೆಯಲಾಗದ ಕ್ಷಣ’ ಕಿರುಚಿತ್ರ ತೆರೆಗೆ!!

ಕಡಬ:ಚಾಮುಂಡೇಶ್ವರಿ ಕ್ರಿಯೇಷನ್ಸ್ ಪಡುಬೆಟ್ಟು ನೆಲ್ಯಾಡಿ ನಿರ್ಮಾಣದ ‘ಮರೆಯಲಾಗದ ಕ್ಷಣ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ನಟ ರವಿ ರಾಮಕುಂಜರನ್ನು ಚಿತ್ರ ತಂಡದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸಾದ್ ಬೀದಿಮನೆ, ಮಹಾಲಿಂಗ ಮಾಸ್ತರ್, ಪಂಚಾಯತ್ ಸದಸ್ಯ ಸಲಾಂ ಬಿಲಾಲ್,ಪುಷ್ಪಾ,ಗೀತಾ ಸೇಸಪ್ಪ,ಚಿತ್ರದ ನಿರ್ದೇಶಕ ಶಿವರಾಮ್,ಎಡಿಟರ್ ಪ್ರವೀಣ್ ವಿಟ್ಲ,ಚಿತ್ರದ ಸಂಭಾಷಣೆ ಮತ್ತು ಸಾಹಿತ್ಯದ ಅನಿಲ್ ವಡಗೇರಿ ಮುಂತಾದವರು ಉಪಸ್ಥಿತರಿದ್ದರು.

ಆನಂದ ಪಡುಬೆಟ್ಟು ಸ್ವಾಗತಿಸಿ,ಶಂಕರ್ ಪಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ?

https://youtu.be/Ug6OTjevFCchttps://youtu.be/vZYbpHSM_rc

Leave A Reply

Your email address will not be published.