ಹಲವು ಆರೋಗ್ಯದ ಸಮಸ್ಯೆಗೆ ರಾಮಬಾಣ ‘ನಿರಂಜನ ಫಲ’!! ಇದರ ಉಪಯೋಗ ಹೇಗೆ, ಆರೋಗ್ಯದ ಮೇಲೆ ಬೀರುವ ಪರಿಣಾಮವೇನು!??

ನಿರಂಜನ ಫಲ
ಭಾರತದಲ್ಲಿ ಎಲ್ಲಾ ವಿಧದ ಆಹಾರ ಪದಾರ್ಥಗಳಲ್ಲಿ ಔಷಧಿಯ ಗುಣಗಳಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಯುರ್ವೇದ ಪದ್ಧತಿಯಲ್ಲಿ ಭಾರತವು ಮುಂದಿದ್ದು, ಇಲ್ಲಿನ ಹಳ್ಳಿ ಮದ್ದುಗಳು ದಿಲ್ಲಿಯಲ್ಲಿಯೂ ಆರೋಗ್ಯ ಗುಣಪಡಿಸುವ ತಾಕತ್ತು ಹೊಂದಿವೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಇವೆ. ಇಂತಹ ಔಷಧಿಯ ಗುಣಗಲಿರುವ ಸಾಲಿಗೆ ಸೇರಿರುವುದೇ ನಿರಂಜನ ಫಲ. ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಈ ಬೀಜ
ಅತ್ಯಂತ ಹೆಚ್ಚು ಔಷಧೀಯ ಗುಣವನ್ನು ಹೊಂದಿದ್ದು, ಹಲವು ಕಾಯಿಲೆಗಳಿಗೆ ರಾಮಬಾಣವಾಗಿ ಎನ್ನುತ್ತದೆ ಆಯುರ್ವೇದ.

ಈ ಎಲ್ಲಾ ಖಾಯಿಲೆಗಳಿಗೆ ಉಪಯೋಗಕಾರಿ

ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟುವುದು, (ಕ್ಯಾನ್ಸರ್) ಕರುಳಿನ ಸಮಸ್ಯೆ, ಕಣ್ಣಿನ ದೃಷ್ಠಿ ಯಲ್ಲಿ ವೃದ್ದಿ, ಮೂಲವ್ಯಾಧಿ ಸಂಪೂರ್ಣವಾಗಿ ಗುಣಮುಖ, ಮಾನಸಿಕ ಕಾಯಿಲೆಗಳಿಂದ ಬಳಲು ವವರಿಗೆ.ಹೃದಯದ ಸಮಸ್ಸೆಗೆ ಅಂತು ದಿವ್ಯ ಔಷಧಿ.ನಿದ್ರಾಹೀನತೆ, ರಕ್ತದೊತ್ತಡ, ರಕ್ತದ ಶುದ್ಧಿಕರಣ,ಚರ್ಮದ ಸಮಸ್ಯೆ ,ಗರ್ಭಕೋಶದ ಸಮಸ್ಯೆ. ಪುರುಷರಲ್ಲಿ ಸ್ಪ್ರೆಮ್ ಕೌಂಟ್ ನ ಸಮಸ್ಯೆ.ಈ ಎಲ್ಲಾ ಖಾಯಿಲೆಗಳನ್ನು ಗುಣಪಡಿಸಬಲ್ಲ ಅತ್ಯಂತ ಔಷಧೀಯ ಗುಣ ಹೊಂದಿರುವ ಈ ಬೀಜವೇ ನಿರಂಜನ ಫಲ

ಉಪಯೋಗಿಸುವ ವಿಧಾನ
ಈ ಬೀಜವು ಒಣಗಿದ ರೀತಿಯಲ್ಲಿ ಇರುತ್ತದೆ, 2 ಬೀಜವನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಲೋಟದಲ್ಲಿ ಶುದ್ಧ ನೀರಿನಲ್ಲಿ ನೆನೆ ಹಾಕಿ ಬೆಳ್ಳಿಗೆ ಖಾಲಿ ಹೊಟ್ಟೆಗೆ ಸೇವಿಸಬೇಕು ಈ ಬೀಜವು ಮರು ದಿನ ಬೆಳಿಗ್ಗೆ ವಿಕಾಸ ಗೊಂಡಿರುತ್ತದೆ .ಇದನ್ನು ಅದೇ ನೀರಿನಲ್ಲಿ ಹಿಸುಕಿ ಸಣ್ಣ ಒಳಗಿನ ಬೀಜವನ್ನು ಬಿಸಾಕಿ ಸೇವಿಸಬೇಕು .3 ತಿಂಗಳು ಸೇವಿಸಬೇಕು ಹಾಗೂ ಆರೋಗ್ಯವಂಗ ವ್ಯಕ್ತಿಯೂ ಸೇವಿಸಬಹುದು.

✍ ವಿನೇಶ್ ಪೂಜಾರಿ ನಿಡ್ಡೋಡಿ

Leave A Reply

Your email address will not be published.