ಟ್ವಿಟ್ಟರ್ ನಲ್ಲಿ ಗೋಮಾಂಸದ ಪೋಸ್ಟ್ ಗಳನ್ನು ಪೋಸ್ಟ್ ಮಾಡದಂತೆ ಚೆನ್ನೈ ಪೊಲೀಸರು ಹೇಳಿದ್ದು, ಈ ಫೋಟೋ ಹಂಚಿಕೊಂಡ ಬಳಕೆದಾರರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಡ ಜನರಲ್ಲಿ ಹೆಚ್ಚಾದ ನಂತರ ಆ ಟ್ವೀಟನ್ನು ಅಳಿಸಲಾಗಿದೆ.
ಈ ಫೋಟೋ ಯೂಸರ್ ನೇಮ್ ಅಬುಬಕರ್ ಎಂಬವರ ಟ್ವಿಟ್ಟರ್ ಖಾತೆಯಿಂದ ‘ಬೀಫ್ ಕರ್ರಿ’ ಎಂಬ ಶೀರ್ಷಿಕೆಯೊಂದಿಗೆ ಭಕ್ಷ್ಯದ ಚಿತ್ರವನ್ನು ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದ ಎ. ತಕ್ಷಣವೇ, ಪೋಸ್ಟ್ ಗೆ ಕೆಲವು ಖಾತೆಗಳಿಂದ ಟೀಕೆಗಳನ್ನು ಬರಲು ಪ್ರಾರಂಭವಾಗಿದೆ. ಅಲ್ಲಿಂದ ಇದು ಗೋಮಾಂಸ ತಿನ್ನುವ ಮತ್ತು ಹಂದಿಮಾಂಸ ತಿನ್ನುವ ಬಗ್ಗೆ ಚರ್ಚೆಗೆ ಕಾರಣವಾಯಿತು.
ಈ ಪ್ರಕರಣ ಬಿಸಿಯಾದಾಗ, ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಗ್ರೇಟರ್ ಚೆನ್ನೈ ಪೊಲೀಸರು (ಜಿಸಿಪಿ) ದಯವಿಟ್ಟು ಅಂತಹ ಪೋಸ್ಟ್ಗಳನ್ನು ಹಾಕಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಈ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸಾರ್ಶಿಪ್ ಆರೋಪದ ಮೇಲೆ ಟೀಕೆಗಳನ್ನು ಎದುರಿಸಲು ಪ್ರಾರಂಭಿಸಿತು.
ಧರ್ಮಪುರಿ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ಈ ಐಡಿ ಹ್ಯಾಂಡಲ್ ಅನ್ನು ಯಾರು ನಿರ್ವಹಿಸುತ್ತಾರೆ? ಆ ಪೋಸ್ಟ್ ನಲ್ಲಿ ಏಕೆ ಮತ್ತು ಏನು ತಪ್ಪಿದೆ? ಏನು ಪೋಸ್ಟ್ ಮಾಡಬೇಕು ಮತ್ತು ಏನು ತಿನ್ನಬೇಕು ಎಂಬುದರ ಬಗ್ಗೆ ಗ್ರೇಟರ್ ಚೆನ್ನೈ ಪೊಲೀಸರ ಅನಗತ್ಯ ಸಲಹೆ ಇದು” ಎಂದು ಸೆಂಥಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇಲ್ಲಿಯವರೆಗೆ ನೂರಾರು ಸುಳ್ಳು ಮತ್ತು ನಿಂದನಾತ್ಮಕ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಅವರು ಜಿಸಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅನೇಕರು ಕಾಮೆಂಟ್ ಮೂಲಕ ಪ್ರಶ್ನಿಸಲು ಪ್ರಾರಂಭಿಸಿದಾಗ, ಟ್ವೀಟ್ ಅನ್ನು ಜಿಸಿಪಿ ಹ್ಯಾಂಡಲ್ನಿಂದ ಅಳಿಸಲಾಯಿತು.
ಗ್ರೇಟರ್ ಚೆನ್ನೈ ಪೊಲೀಸ್ ಟ್ವಿಟ್ಟರ್ ಹ್ಯಾಂಡಲ್ಗೆ ಪೋಸ್ಟ್ ಅನ್ನು ರೀಟ್ವೀಟ್ ಮಾಡಲಾಗಿದೆ ಎಂದು ಜಿಸಿಪಿ ವಿವರಣೆಯನ್ನು ಸಹ ಒದಗಿಸಿದೆ. ಆದ್ದರಿಂದಲೇ ಜಿಸಿಪಿ ಟ್ವಿಟರ್ ಬಳಕೆದಾರರನ್ನು ಹಾಗೆ ಮಾಡದಂತೆ ಮನವಿ ಮಾಡಿದೆ, ಏಕೆಂದರೆ ಸಾರ್ವಜನಿಕವಾಗಿ ಪೋಸ್ಟ್ ಹರಿಬಿಟ್ಟಿದ್ದಕ್ಕಾಗಿ ಅಬುಬಕರ್ ಅವರು ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
You must log in to post a comment.