ಗೋವಿನ ಹತ್ಯೆಯಾದರೆ ಪ್ರತಿಯಾಗಿ ಮಾನವ ಹತ್ಯೆ ಕೂಡ ಆದೀತು ಎಚ್ಚರಿಕೆ – ಅರುಣ್ ಕುಮಾರ್ ಪುತ್ತಿಲ

ಸವಣೂರು : ರಕ್ತಪಾತಕ್ಕೆ ರಕ್ತಪಾತವೇ ಉತ್ತರ ಕೊಡಬೇಕು,ಹತ್ಯೆಗೆ ಪ್ರತಿ ಹತ್ಯೆಯ ಮೂಲಕ ಉತ್ತರಕೊಡಬೇಕು.ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಅವರು ಜು.1 ರಂದು ಸಂಜೆ ಸವಣೂರು ಜಂಕ್ಷನ್ ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಸವಣೂರು ಹಿಂದು ಜಾಗರಣ ವೇದಿಕೆಯ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಎಂಬ ಕಾರಣಕ್ಕೆ ಅಮಾಯಕ ಟೈಲರ್ ಕನ್ಹಯ್ಯ ಲಾಲ್ಅವರನ್ನು ಹತ್ಯೆ ಮಾಡಿದ ಘಟನೆ ಖಂಡನೀಯ.ಅಮಾಯಕನ್ನು ಹತ್ಯೆ ಮಾಡಿದ ಮುಸಲ್ಮಾನ ಮೂಲಭೂತವಾದಿಗಳು ಹತ್ಯೆ ಕೃತ್ಯ ಎಸಗಲು ಆರೋಪಿಗಳು ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಹಿಂದೂಗಳಲ್ಲಿ ಭಯ ಉಂಟುಮಾಡುವ ತಂತ್ರ ಇದು ಎಂದ ಅವರು,ಹಿಂದೂ ಸಮಾಜ ಇಂತಹ ಘಟನೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದೆ.ಮುಂಬರುವ ದಿನಗಳಲ್ಲಿ ನಡೆಯುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಿಂದೂಗಳ ಆರಾಧ್ಯ ದೈವ ಗೋವಿನ ಹತ್ಯೆ ಮಾಡಿದರೆ ಅದಕ್ಕೆ ಪ್ರತ್ಯುತ್ತರವಾಗಿ ಮಾನವ ಹತ್ಯೆಯಾದೀತು ಎಂಬ ಎಚ್ಚರಿಕೆ ನೀಡಿದರು.ಹತ್ಯೆ ದೃಶ್ಯಗಳನ್ನು ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿರುವುದನ್ನು ಗಮನಿಸಿದರೆ ಅವರ ರಾಕ್ಷಸೀಯ ಮನಸ್ಥಿತಿಯ ಅರಿವಾಗುತ್ತದೆ.ಮುಸಲ್ಮಾನ ಮೂಲಭೂತವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಮಾನವೀಯ ಮೌಲ್ಯಗಳನ್ನು ಬಿಟ್ಟು ಅನೇಕ ಕೆಲಸಗಳನ್ನು ಮಾಡಿದ್ದಾರೆ.ದೇಶದ ಸಂವಿಧಾನವನ್ನು ಗೌರವಿಸುವ ಬಹುಸಂಖ್ಯಾತ ಹಿಂದೂಗಳ ಭಾವನೆಗಳ ವಿರುದ್ದ ,ಧಾರ್ಮಿಕ ಕೇಂದ್ರಗಳ ವಿರುದ್ದ,ಸಂವಿಧಾನದ ವಿರುದ್ದ ವ್ಯವಸ್ಥಿತ ಕೆಲಸಮಾಡುತ್ತಿದ್ದಾರೆ.ಇವುಗಳ ವಿರುದ್ದ ತಕ್ಕ ಉತ್ತರ ನೀಡಲು ಹಿಂದೂ ಸಮಾಜ ಸಿದ್ದವಾಗಿದೆ.ಕಾಂಗ್ರೇಸ್ ನೇತೃತ್ವದ ರಾಜಸ್ಥಾನ ಸರಕಾರಕ್ಕೆ ಕನ್ಹಯ್ಯ ಲಾಲ್ ರಕ್ಷಣೆ ಕೋರಿದರೂ ರಕ್ಷಣೆ ನೀಡದೆ ಅಮಾಯಕನ ಹತ್ಯೆ ಹಿಂದೆ ಸರಕಾರವೂ ಕೈಜೋಡಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ,ದೇಶದ ಸ್ವಾತಂತ್ರ್ಯ ಸಮಯದಲ್ಲೇ ಮುಸ್ಲಿಂರಿಗೆ ಪ್ರತ್ಯೇಕ ರಾಷ್ಟ್ರ ಬೇಕೆಂಬ ಹಿನ್ನಲೆಯಲ್ಲಿ ದೇಶವನ್ನು ತುಂಡುಮಾಡಿ ಪಾಕಿಸ್ಥಾನವೆಂದು ಬೇರ್ಪಡಿಸಲಾಯಿತು.ಅದರೂ ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳು ಈ ದೇಶದಲ್ಲಿ ಯಾವುದೇ ಧರ್ಮ,ಮತ ಬೇಧವಿಲ್ಲದೆ ಬದುಕುತ್ತೇವೆ ಎಂಬ ದೃಷ್ಟಿಯಿಂದ ದೇಶದಲ್ಲಿ ಸೌಹಾರ್ಧತೆಯಿಂದ ವಿಶಾಲ ಮನಸ್ಸಿನಿಂದ ಅವಕಾಶ ನೀಡಲಾಯಿತು.ಅಂದಿನಿಂದ ಪ್ರಾರಂಭಗೊಂಡ ರಾಜಕೀಯ ಲಾಭಗೋಸ್ಕರ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿ,ಒಂದು ವರ್ಗದ ತುಷ್ಟೀಕರಣ ನೀತಿ ಈಗಲೂ ಮುಂದುವರಿದಿದೆ.ಅದರ ಪರಿಣಾಮವೇ ಮುಸ್ಲಿಂರಿಂದ ಅಮಾಯಕ ಹಿಂದೂಗಳ ಹತ್ಯೆಗಳು ನಡೆಯುತ್ತಿರುವುದು.ನಮ್ಮ ದೇಶದ ಶತ್ರು ರಾಷ್ಟ್ರ ಪಾಕಿಸ್ತಾನ,ಐಸಿಸ್,ಪಾಕಿಸ್ಥಾನ ಸೇನೆ ಈ ಕನ್ಹಯ್ಯ ಲಾಲ್ಹತ್ಯೆ ಹಿಂದೆ ಇದೆ.ಪಾಕಿಸ್ಥಾನ ಪ್ರೇರಿತ ಮತಾಂದ ಶಕ್ತಿಗಳ ವಿರುದ್ದ ಭಾರತದ ಮುಸ್ಲಿಮರು ಧ್ವನಿಯೆತ್ತಬೇಕು.ಆ ಮೂಲಕ ದೇಶದ ಸೌಹಾರ್ಧತೆಗೆ ತಾವು ಕೂಡ ಕೊಡುಗೆಯಾಗಬೇಕು.ನಮ್ಮ ದೇಶದಲ್ಲಿ ವಿಶಾಲತೆಯಿಂದ ಜೀವಿಸುತ್ತಿರುವ ನಾವೂ ಪಾಕಿಸ್ಥಾನದ ಪ್ರೇರಿತ ಶಕ್ತಿಗಳ ವಿರುದ್ದ ಧ್ವನಿಯಾಗಬೇಕು ಎಂದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು,ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಪ್ರಮುಖರಾದ ಅಶೋಕ್ ತ್ಯಾಗರಾಜ ನಗರ,ಪುತ್ತೂರು ನಗರ ಸಂಯೋಜಕರ ಸ್ವಸ್ತಿಕ್ ರೈ ಮೇಗಿನಗುತ್ತು,ಹಿಂ.ಜಾ.ವೇ.ಯ ತಾಲೂಕು ಸಹಸಂಯೋಜಕ ಪುಷ್ಪರಾಜ ಸವಣೂರು,ಅವಿನಾಶ್ ಪುರುಷರ ಕಟ್ಟೆ ,ತಾಲೂಕು ಹಿಂದೂ ವಾಹಿನಿ ಪ್ರಮುಖ್ಗೀತೇಶ್ಅಜ್ಜಿಕಲ್ಲು,ಸವಣೂರು ವಲಯ ಸಂಯೋಜಕರ ಶ್ರೀಧರ ಇಡ್ಯಾಡಿ,ಸಹ ಸಂಯೋಜಕ್ ನಿಶಾಂತ್ ಪರಣೆ ,ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ,ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ,ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಗ್ರಾ.ಪಂ.ಸದಸ್ಯರಾದ ಸತೀಶ್ಅಂಗಡಿಮೂಲೆ,ತೀರ್ಥರಾಮ ಕೆಡೆಂಜಿ,ಚಂದ್ರಾವತಿ ಸುಣ್ಣಾಜೆ,ಮಾಜಿ ಸದಸ್ಯರಾದ ಪ್ರಕಾಶ್ ಕುದ್ಮನಮಜಲು,ಸತೀಶ್ ಬಲ್ಯಾಯ,ದೈಪಿಲ ಕ್ರೀಡೆ ಹಾಗೂ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ,ತಿರಂಗಾ ವಾರಿಯರ್ಸ್‌ ನ ಲೋಕೇಶ್ ಬಿ.ಎನ್,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ ಮೊದಲಾದವರು ಪಾಲ್ಗೊಂಡಿದ್ದರು.

ಹಿಂದೂ ಜಾಗರಣ ವೇದಿಕೆಯ ಸವಣೂರು ಘಟಕದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಅವರು ಸ್ವಾಗತಿಸಿ ವಂದಿಸಿದರು.

ಹಿಂದೂಗಳ ಅಂಗಡಿ ಬಂದ್
ಪ್ರತಿಭಟನೆ ವೇಳೆಯಲ್ಲಿ ಸವಣೂರಿನ ಪೇಟೆಯಲ್ಲಿರುವ ಹಿಂದೂಗಳ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು.ಮಳೆಯನ್ನೂ ಲೆಕ್ಕಿಸದೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕುದ್ಮಾರು,ಬೆಳಂದೂರು,ಕಾಣಿಯೂರು,ಆಲಂಕಾರು,ಸರ್ವೆ,ಪಾಲ್ತಾಡಿ,ಅಂಕತ್ತಡ್ಕ ಮೊದಲಾದ ಕಡೆಗಳಿಂದ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಕನ್ಹಯ್ಯ ಲಾಲ್ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ಶಾಂತಿ ಮಂತ್ರದೊಂದಿಗೆ ಪ್ರತಿಭಟನೆ ಮುಕ್ತಾಯವಾಯಿತು.

Leave A Reply

Your email address will not be published.