ಹಾಡಹಗಲೇ ಮಹಿಳೆಗೆ ಚೂರಿ ಇರಿದು ಹತ್ಯೆ!! ಆರೋಪಿ ರಿಕ್ಷಾ ಚಾಲಕ ಪೊಲೀಸರ ವಶಕ್ಕೆ!!

ವಿಟ್ಲ: ಅನಂತಾಡಿಯ ಜನಪ್ರಿಯ ಗಾಡರ್ನ್ ಬಳಿ, ಮಹಿಳೆಯ ಮೇಲೆ ಯುವಕನೋರ್ವ ಚೂರಿ ಇರಿದು
ಪರಾರಿಯಾಗಿದ್ದು, ಇದೀಗ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಪತ್ತೆಯಾಗಿದ್ದಾನೆ.

ಬಂಧಿತ ಆರೋಪಿಯನ್ನು ವಿಟ್ಲ ಮುಡ್ನೂರು ಶ್ರೀಧರ ಎಂದು ಗುರುತಿಸಲಾಗಿದೆ.

ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ, ಆರೋಪಿ ಅಡ್ಡಗಟ್ಟಿ ಚೂರಿ ಇರಿದು ಪರಾರಿಯಾಗಿದ್ದ ಆರೋಪಿ ಇದೀಗ ಪೋಲಿಸರ ಕೈ ವಶವಾಗಿದ್ದಾನೆ. ಮೃತರ ಪತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಮೂರು ಗಂಟೆಯೊಳಗೆ ಬಂಧಿಸಿದ್ದಾರೆ.

Leave A Reply

Your email address will not be published.