ವಿಜಯನಗರ
ಹೊಸಪೇಟೆ: ಹೊಸಪೇಟೆಯ ಪುನೀತ್ ರಾಜಕುಮಾರ ವೃತ್ತದಲ್ಲಿ ಇಂದು ಸಂಜೆ ಪುನೀತರಾಜಕುಮಾರ್ ಕಂಚಿನ ಪ್ರತೀಮೆ ಅನಾವರಣಗೊಳ್ಳಲಿದೆ.
ಪುನೀತ ರಾಜಕುಮಾರ ಹೊಸಪೇಟೆಯ ಅವಿನಾಭಾವ ಸಂಬಂದ ಸೇರಿದಂತೆ ಹೊಂದಿದ ಪ್ರೀತಿ ಹಿನ್ನೆಲೆಯಲ್ಲಿ ಅಭಿಮಾನಿಗಳು ರೋಟರಿ ನಿರ್ವಹಣೆಯ ವೃತ್ತವನ್ನು ಪುನೀತ ರಾಜಕುಮಾರ ವೃತ್ತವಾಗಿ ನಾಮಕರಣ ಮಾಡಿ ಅಭಿವೃದ್ಧಿ ಪಡಿಸಿದ್ದು ನಗರಕ್ಕೆ ಮಾದರಿಯಾಗಿ ಮಾಡಿದ್ದು ಕಂಚಿನ ಪುತ್ತಳ್ಳಿಯನ್ನು ನಿರ್ಮಾಣದ್ದು ಅದನ್ನು ರಾಜಕುಟುಂಬದ ಸಮಕ್ಷಮದಲ್ಲಿ ಅನಾವರಣ ಮಾಡಲು ಅಭಿಮಾನಿ ಬಳಗ ಮುಂದಾಗಿದೆ.
ಇಂದು ಸಂಜೆ 5 ಗಂಟೆಗೆ ರಾಘವೇಂದ್ರ ರಾಜಕುಮಾರ ಸೇರಿದಂತೆ ಸಚಿವ ಆನಂದಸಿಂಗ್ ಹಾಗೂ ಪ್ರಖ್ಯಾತ ಕಲಾವಿದರಿಂದ ರಸಮಂಜರಿ ಆಯೋಜಿಸಲಾಗಿದ್ದು ಆ ಮೂಲಕ ಪುತ್ತಳ್ಳಿಯನ್ನು ಲೋಕಾಪರ್ಣೆ ಮಾಡಲಿದೆ.