ಸನ್ನಡತೆ ಆಧಾರದ ಮೇಲೆ ಐವರು ಕೈದಿಗಳಿಗೆ ಬಿಡುಗಡೆ ಭಾಗ್ಯ
![](https://hosakannada.com/wp-content/uploads/2022/05/IMG-20220526-WA0038.jpg)
ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಐವರು ಕೈದಿಗಳಿಗೆ ಗುರುವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.
![](https://hosakannada.com/wp-content/uploads/2024/07/First.jpeg)
ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಹುಬ್ಬಳ್ಳಿಯ ಪರಶುರಾಮ ನವಲಗುಂದ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಹನಮಂತಪ್ಪ ದೊಡ್ಡಮನಿ, ಶಿವಮೊಗ್ಗದವರಾದ ನಯಾಜುಲ್ಲಾ ಮೌಲಾಸಾಬ್, ಸೈಯದಖಾದರ್ ಮೊಯಿದ್ದೀನ್, ಕಲಘಟಗಿ ತಾಲೂಕಿನ ಶಂಕರಪ್ಪ ದೊಡ್ಡಮನಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ರಾಜ್ಯದಾದ್ಯಂತ 96 ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಧಾರವಾಡ ಕೇಂದ್ರ ಕಾರಾಗೃಹದಿಂದ ಐವರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.