ವಿಟ್ಲ: ಪೋಷಕರು ಬುದ್ಧಿಮಾತಿಗೆ ಬೈದರೆಂದು ಆತ್ಮಹತ್ಯೆಗೆ ಶರಣಾದ ಬಾಲಕ
![](https://hosakannada.com/wp-content/uploads/2022/05/IMG-20220508-WA0009.jpg)
ಪೋಷಕರು ಬುದ್ಧಿವಾದ ಹೇಳಿದ್ದರೆಂಬ ಕಾರಣಕ್ಕೆ ನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿಂದ ವರದಿಯಾಗಿದೆ.
![](https://hosakannada.com/wp-content/uploads/2024/07/First.jpeg)
ಮೃತ ಬಾಲಕನನ್ನು ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಎಂಬವರ ಪುತ್ರ ಉಜ್ವಲ್(14) ಎಂದು ಗುರುತಿಸಲಾಗಿದೆ. ಅತಿಯಾಗಿ ಟಿ.ವಿ ನೋಡುತ್ತಿದ್ದ ಉಜ್ವಲ್ ನಿಗೆ ಪೋಷಕರು ಬುದ್ಧಿ ಹೇಳಿದ್ದು, ಇದನ್ನೇ ಮನಸ್ಸಿಗೆ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
![](https://hosakannada.com/wp-content/uploads/2024/07/Middle.jpeg)