ಉಪ್ಪಿನಂಗಡಿ : ಕರುವನ್ನು ಮೇಯಲು ಕರೆದುಕೊಂಡು ಹೋಗುವಾಗ, ದುಷ್ಕರ್ಮಿಗಳ ತಂಡದಿಂದ ಹಲ್ಲೆ| ನ್ಯಾಯಕ್ಕಾಗಿ ಮಹಿಳೆಯ ಮೊರೆ

ಉಪ್ಪಿನಂಗಡಿ: ಮೇಯಲು ಬಿಟ್ಟಿದ್ದ ಕರುವನ್ನು ಕರೆದುಕೊಂಡು ಹೋಗುವ ವೇಳೆ ದುಷ್ಕರ್ಮಿಗಳ ತಂಡವೊಂದು ಮಹಿಳೆಯ ಬಟ್ಟೆ ಹರಿದು ಹಾಕಿ ಮಾಂಗಲ್ಯ ಕಿತ್ತು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಬೊಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಮಹಿಳೆಯ ಕತ್ತಿಗೆ ಕೈ ಹಾಕಿ ಮಾನಭಂಗ ಹಾಗೂ ಹಲ್ಲೆ ನಡೆಸಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇನ್ನು ಹಲ್ಲೆ ನಡೆಸಿ 24 ಗಂಟೆ ಕಳೆದರೂ ಪೊಲೀಸರು ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ನಮಗೆ ನ್ಯಾಯ ಸಿಗಲೇ ಬೇಕು ಎಂಬ ಎಂಬ ಬೇಡಿಕೆಯನ್ನು ಮಹಿಳೆ ಮುಂದಿಟ್ಟಿದ್ದಾರೆ.
ಸದ್ಯ ಮಹಿಳೆ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Leave A Reply

Your email address will not be published.