ವಿಟ್ಲ : ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ| ಸವಾರರಿಗೆ ಗಾಯ!

ವಿಟ್ಲ : ಇಂದು ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆಯೊಂದು ವಿಟ್ಲ ಸಮೀಪ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ.

ಮಹಮ್ಮದ್ ಯಾಸಿನ್ (21) ಹಾಗೂ ಅಬ್ದುಲ್ ರಹಿಮಾನ್ ಗಾಯಗೊಂಡ ಸವಾರರಾಗಿದ್ದು, ಯಾಸಿನ್ ಕಾಲಿಗೆ ಗಂಭೀರ ಗಾಯವಾಗಿದ್ದು, ರಹಿಮಾನ್ ನ ಕೈಗೆ ಗಾಯವಾಗಿದೆ. ಅವರಿಬ್ಬರು ತಾವೇ ಬಿದ್ದು ಗಾಯ ಗೊಂಡಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಅಪಘಾತ ಇಂದು ಬೆಳಿಗ್ಗೆ ಸಂಭವಿಸಿದ್ದು ರಿಕ್ಷಾ ಚಾಲಕ ಕನ್ಯಾನ ಮೂಲದವ ಎಂದು ತಿಳಿದು ಬಂದಿದೆ. ಅಪಘಾತ ನಡೆಯುತ್ತಲೇ ರಿಕ್ಷಾ ಚಾಲಕ ತಪ್ಪಿಸಿ ಓಡಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಸ್ಥಳೀಯರು ಹಿಡಿದು ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.