ವಿಟ್ಲ : ಕರಾಟೆ ಶಿಕ್ಷಕ ನೇಣಿಗೆ ಶರಣು!

ವಿಟ್ಲ : ಕರಾಟೆ ಶಿಕ್ಷಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲ ಸಮೀಪದ ನೀರ್ಕಜೆ ಖಂಡಿಗ ಎಂಬಲ್ಲಿ ನಡೆದಿದೆ.

ಧರ್ಣಪ್ಪ ನಾಯ್ಕ (38) ಎಂಬುವವರೇ ಮೃತ ದುರ್ದೈವಿ.

ಮಂಗಳೂರಿನಲ್ಲಿ ಕರಾಟೆ ಶಿಕ್ಷಕರಾಗಿದ್ದ ಧರ್ಣಪ್ಪ ನಾಯ್ಕ ಬಹಳ ಖ್ಯಾತಿ ಹೊಂದಿದ್ದರು. ಅವರ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇಂತಿಪ್ಪ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಕಾರಣ ನಿಗೂಢವಾಗಿಯೇ ಉಳಿದಿದೆ. ಮೃತರು ಪತ್ನಿ, ಮಗು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Leave A Reply

Your email address will not be published.