ಪೆರೋಲ್ ಖೈದಿ ನಾಪತ್ತೆಯಾದರೆ ಜಾಮೀನು ಕೊಟ್ಟವರ ಆಸ್ತಿ ಜಪ್ತಿ: ಸಚಿವ ಅರಗ ಜ್ಞಾನೇಂದ್ರ
![](https://hosakannada.com/wp-content/uploads/2022/03/IMG_20220325_094938.jpg)
ರಾಜ್ಯದಲ್ಲಿ ಇನ್ಮುಂದೆ ಪೆರೋಲ್ ಖೈದಿ ನಾಪತ್ತೆಯಾದರೆ, ಜಾಮೀನು ಕೊಟ್ಟವರ ಆಸ್ತಿ ಜಪ್ತಿ ಮಾಡಲಾಗುತ್ತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನಪರಿಷತ್ ನಲ್ಲಿ ಅಂಗೀಕರಿಸಿದ್ದಾರೆ.
![](https://hosakannada.com/wp-content/uploads/2024/07/First.jpeg)
ಈ ಕುರಿತು ಮಾತನಾಡಿದ ಜ್ಞಾನೇಂದ್ರ ಅವರು, ಈ ವಿಧೇಯಕವನ್ನು ಪೆರೋಲ್ ಪಡೆದ ವ್ಯಕ್ತಿಗೆ ಜಾಮೀನು ನೀಡುವ ವ್ಯಕ್ತಿ ಜವಾಬ್ದಾರಿ ಹೊಂದಿರಬೇಕು ಎಂಬ ಕಾರಣದಿಂದಾಗಿ ತರಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಈ ತಿದ್ದು ಪಡಿಯಿಂದಾಗಿ ನ್ಯಾಯಯುತವಾಗಿ ಜಾಮೀನು ನೀಡಿದ ವ್ಯಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಾಮೀನು ನೀಡುವುದನ್ನೇ ದಂಧೆ ಮಾಡಿಕೊಂಡವರಿಗೆ, ಆ ಕೆಲಸ ಮಾಡಬಾರದು ಎಂಬ ಕಾರಣದಿಂದ ಈ ತಿದ್ದುಪಡಿ ಮಾಡಲಾಗಿದೆ.
ಇಲ್ಲಿಯವರೆಗೆ 15 ಖೈದಿಗಳು ಪೆರೋಲ್ ಮೇಲೆ ತೆರಳಿ ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಕರ್ನಾಟಕ ಬಂಧೀಖಾನೆಗಳ ತಿದ್ದುಪಡಿ ವಿಧೇಯಕದ ಅನುಸಾರವಾಗಿ, ಇನ್ಮುಂದೆ ಪೆರೋಲ್ ಕೈದಿ ನಾಪತ್ತೆಯಾದ್ರೆ, ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ.