ಇಸ್ಕಾನ್ ದೇವಾಲಯದ ಮೇಲೆ ದುಷ್ಕರ್ಮಿಗಳ ದಾಳಿ-ಅಪಾರ ಹಾನಿ!! ಅಲ್ಲಾಹೋ ಅಕ್ಬರ್ ಎನ್ನುತ್ತಾ ನುಗ್ಗಿದ 200 ಕ್ಕೂ ಹೆಚ್ಚು ಮಂದಿಯ ತಂಡ

Share the Article

ಬಾಂಗ್ಲಾದೇಶದ ಢಾಕಾ ದಲ್ಲಿರುವ ವಿಶ್ವ ವಿಖ್ಯಾತ ಇಸ್ಕಾನ್ ದೇಗುಲದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಮೂರ್ತಿ ಹಾಗೂ ಇನ್ನಿತರ ವಸ್ತುಗಳು ಧ್ವಂಸ ನಡೆಸಲಾಗಿದೆ.

ಅಲ್ಲಾಹೋ ಅಕ್ಬರ್ ಎಂದು ಹೇಳುತ್ತಾ ದೇವಾಲಯದೊಳಕ್ಕೆ ನುಗ್ಗಿದ ಸುಮಾರು 200 ಕ್ಕೂ ಹೆಚ್ಚು ಮಂದಿಯ ತಂಡ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದ್ದು, ಹಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಎಗರಿಸಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.

ಘಟನೆಯಲ್ಲಿ ಮೂವರು ಹಿಂದೂಗಳಿಗೆ ಗಾಯಗಳಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.